ನಾಟಿ ವೈದ್ಯರ ಹಿತ ಕಾಪಾಡಲು ಹೊಸ ನೀತಿ: ಸಚಿವ ರಮೆಶ್ ಕುಮಾರ್

Published : Jun 20, 2017, 10:04 AM ISTUpdated : Apr 11, 2018, 12:57 PM IST
ನಾಟಿ ವೈದ್ಯರ ಹಿತ ಕಾಪಾಡಲು ಹೊಸ ನೀತಿ: ಸಚಿವ ರಮೆಶ್ ಕುಮಾರ್

ಸಾರಾಂಶ

ಗ್ರಾಮೀಣ ಭಾಗದಲ್ಲಿರುವ ನಾಟಿ ವೈದ್ಯರ ಹಿತ ಕಾಪಾಡಲು ನೀತಿಯೊಂದನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ರಚಿಸಿರುವ ಸಮಿತಿ ಇನ್ನೊಂದು ತಿಂಗಳಲ್ಲಿ ವರದಿ ನೀಡಲಿದೆ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ತಿಳಿಸಿದ್ದಾರೆ.

ವಿಧಾನ ಪರಿಷತ್ತು:  ಗ್ರಾಮೀಣ ಭಾಗದಲ್ಲಿರುವ ನಾಟಿ ವೈದ್ಯರ ಹಿತ ಕಾಪಾಡಲು ನೀತಿಯೊಂದನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ರಚಿಸಿರುವ ಸಮಿತಿ ಇನ್ನೊಂದು ತಿಂಗಳಲ್ಲಿ ವರದಿ ನೀಡಲಿದೆ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ತಿಳಿಸಿದ್ದಾರೆ.

ನಕಲಿ ವೈದ್ಯರ ಹಾವಳಿ ಕುರಿತು ಬಿಜೆಪಿಯ ಎಸ್‌.ವಿ. ಸಂಕನೂರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ಭಾಗದಲ್ಲಿ ನಾಟಿ ವೈದ್ಯರು, ಪರಂಪರಾಗತವಾಗಿ ಔಷಧ, ಚಿಕಿತ್ಸೆ ನೀಡುವ ಕುಟುಂಬಗಳು ಇನ್ನೂ ಇವೆ. ಇವರಿಂದ ಗ್ರಾಮೀಣ ಜನತೆಗೆ ಅನುಕೂಲವಾ ಗಿದೆ. ಗ್ರಾಮೀಣ ಭಾಗಗಳಲ್ಲಿ ಪರಂಪರಾಗತ ವಾಗಿ ಚಿಕಿತ್ಸೆ ನೀಡುತ್ತಿರುವವರು ನಕಲಿ ವೈದ್ಯ ರಲ್ಲ, ಇಂತಹ ಗ್ರಾಮೀಣ ನಾಟಿ ವೈದ್ಯರಿಗಾ ಗಿಯೇ ನೀತಿ ರಚಿಸಲಾಗುತ್ತಿದೆ ಎಂದರು.

ನಕಲಿ ವೈದ್ಯರ ಮಟ್ಟಹಾಕಲು ಮಾರ್ಗೋಪಾಯಗಳನ್ನು ಕಂಡು ಹಿಡಿಯಲಾಗಿದ್ದು, ಪ್ರತೀ ಜಿಲ್ಲೆಯಲ್ಲಿ ನಕಲಿ ವೈದ್ಯರನ್ನು ಗುರುತಿಸಲು ರಚಿಸಿರುವ ಕಾರ್ಯಪಡೆ ನಾಟಿ ವೈದ್ಯರನ್ನೂ ಗುರುತು ಮಾಡಲಿದೆ. ಇವರನ್ನು ನಕಲಿ ವೈದ್ಯರ ಪಟ್ಟಿಗೆ ಸೇರುವುದಿಲ್ಲವೆಂದು ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ನಿಯಮ ಶೀಘ್ರ ಜಾರಿ: ಸಚಿವ ಶಿವರಾಜ ತಂಗಡಗಿ
25000 ಕೋಟಿ ದಲಿತರ ಹಣ ಗ್ಯಾರಂಟಿಗೆ ಬಳಕೆ: ಸಚಿವ ಎಚ್‌.ಸಿ.ಮಹದೇವಪ್ಪ