ತಿರುಪತಿ ಲಾಡಲ್ಲಿ ಸೂಜಿ ಪತ್ತೆ : ತನಿಖೆಗೆ ಆದೇಶ

Published : Aug 16, 2019, 10:25 AM IST
ತಿರುಪತಿ ಲಾಡಲ್ಲಿ ಸೂಜಿ ಪತ್ತೆ : ತನಿಖೆಗೆ ಆದೇಶ

ಸಾರಾಂಶ

ವಿಶ್ವ ಪ್ರಸಿದ್ಧ ತಿರುಪತಿ ಬಾಲಾಜಿ ದೇವಾಲಯದ ಲಡ್ಡುವಿನಲ್ಲಿ ಸೂಜಿ ಪತ್ತೆಯಾಗಿದ್ದು ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. 

ನೆಲ್ಲೂರು [ಆ.16]: ಭಕ್ತರ ಆರಾಧ್ಯ ದೈವ ವೆಂಕಟೇಶ್ವರನಷ್ಟೇ ಖ್ಯಾತವಾಗಿರುವ ತಿರುಪತಿ ಲಡ್ಡುವಿನಲ್ಲಿ ಸೂಜಿ ಕಂಡು ಬಂದ ಘಟನೆ ಬೆಳಕಿಗೆ ಬಂದಿದೆ. ಶಶಾಂಕ್‌ ರೆಡ್ಡಿ ಎಂಬ ಭಕ್ತರೊಬ್ಬರು ಮಂಗಳವಾರ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಬಳಿಕ ಖರೀದಿಸಿದ ಲಡ್ಡುವಿನಲ್ಲಿ ಸೂಜಿ ಪತ್ತೆಯಾಗಿದೆ. 

ಮನೆಗೆ ತೆಗೆದುಕೊಂಡು ಬಂದು ತಿನ್ನುವಾಗ ಪ್ರಸಾದದಲ್ಲಿ ಸೂಜಿ ಬಂದಿದೆ ಎಂದು ಶಶಾಂಕ್‌ ಆರೋಪಿಸಿದ್ದಾರೆ. 

ಇಬ್ಬರು ಎನ್ನಾರೈಗಳಿಂದ ತಿಮ್ಮಪ್ಪನಿಗೆ 14 ಕೋಟಿ ರೂಪಾಯಿ ದೇಣಿಗೆ!

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಲಾಡು ತಯಾರಿಕೆ ವೇಳೆ ಸಿಬ್ಬಂದಿಯ ನಿರ್ಲಕ್ಷ್ಯ, ಅಚಾತುರ್ಯದ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್