ನಮ್ಮ ಬೆಂಗಳೂರು ಫೌಂಡೇಷನ್'ನಿಂದ ಕೋಳಿವಾಡ ವರದಿ ಪ್ರಸ್ತುತತೆಯ ಬಗ್ಗೆ ಸಂವಾದ

Published : Dec 09, 2017, 07:05 PM ISTUpdated : Apr 11, 2018, 01:08 PM IST
ನಮ್ಮ ಬೆಂಗಳೂರು ಫೌಂಡೇಷನ್'ನಿಂದ ಕೋಳಿವಾಡ ವರದಿ ಪ್ರಸ್ತುತತೆಯ ಬಗ್ಗೆ ಸಂವಾದ

ಸಾರಾಂಶ

ನಮ್ಮ ಬೆಂಗಳೂರು ಫೌಂಡೇಷನ್'ನಿಂದ ಕೋಳಿವಾಡ ವರದಿ ಪ್ರಸ್ತುತತೆಯ ಬಗ್ಗೆ ಸಂವಾದ

ಬೆಂಗಳೂರು(ಡಿ.09): ನೀರಿಲ್ಲದ ಕೆರೆಗಳನ್ನು ಮೃತ ಕೆರೆಗಳೆಂದು ಘೋಷಿಸಿ ಲೇಔಟ್​​ ನಿರ್ಮಿಸಲು ಅವಕಾಶ ಕೊಟ್ಟಿರುವ ಕೋಳಿವಾಡ ಸಮಿತಿಯ ವರದಿಯ ಪ್ರಸ್ತುತೆಯ ಬಗ್ಗೆ ಇಂದು ಕಬ್ಬನ್​​ ಪಾರ್ಕ್​​ನಲ್ಲಿ ನಾಗರೀಕ ಸಂವಾದ ನಡೆಯಿತು. ಸರ್ಕಾರದ ಉದ್ದೇಶಗಳನ್ನು ಪ್ರಶ್ನಿಸಿ ಬೆಂಗಳೂರನ್ನು ಉಳಿಸಿಕೊಳ್ಳುವ ಮಾರ್ಗೋಪಾಯದ ಬಗ್ಗೆ ಯುನೈಟೆಡ್​​ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್​​, ಸಿಟಿಝನ್​ ಅ್ಯಕ್ಷನ್​ ಫೋರಂ ಸೇರಿದಂತೆ ಹಲವು ನಾಗರೀಕ ಸಂಘಟನೆಗಳು ಚರ್ಚೆ ನಡೆಸಿದವು. ಸಂಸದ ರಾಜೀವ ಚಂದ್ರಶೇಖರ್, ಸುಪ್ರೀಂ ಕೋರ್ಟ್​ ವಕೀಲ ಸಜ್ಜನ್​ ಪೂವಯ್ಯ,  ಸೇರಿದಂತೆ ಹಲವಾರು ಪರಿಸರ ಪ್ರೇಮಿಗಳು, ಸಾಮಾಜಿಕ ಹೋರಾಟಗಾರ, ತಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ 170 ಸ್ಥಾನದ ಭರ್ಜರಿ ಗೆಲುವು, 7ಕ್ಕೆ ಕುಸಿದ ಕಾಂಗ್ರೆಸ್
'ಯಾವುದಾದರೂ ಪುಸ್ತಕ ಸುಟ್ಟುಹಾಕಿದ್ದರೆ ಅದರು ಹೇಳಿ ಹೋಗು ಕಾರಣ..' ಲೇಖಕಿಯ ಪೋಸ್ಟ್‌ಗೆ ಭಾರೀ ಕಾಮೆಂಟ್ಸ್‌!