ದುಡ್ಡಿನ 'ಕ್ರಾಂತಿ' ಮಾಡುತ್ತಿದ್ದ ನಕ್ಸಲ್‌ ಮುಖಂಡನ ಆಸ್ತಿ ಜಪ್ತಿ

Published : May 31, 2018, 02:25 PM IST
ದುಡ್ಡಿನ 'ಕ್ರಾಂತಿ' ಮಾಡುತ್ತಿದ್ದ ನಕ್ಸಲ್‌ ಮುಖಂಡನ ಆಸ್ತಿ ಜಪ್ತಿ

ಸಾರಾಂಶ

ಸಮತೆಯ ನಾಡಿಗಾಗಿ ರಕ್ತಕ್ರಾಂತಿ ಎನ್ನುತ್ತಾ ದುರ್ಮಾರ್ಗದಿಂದ ನಕ್ಸಲೀಯರು ಹಣ ಸಂಪಾದಿಸುವುದು ಹೊಸದೇನಲ್ಲ. ದರೋಡೆ ಸೇರಿದಂತೆ ಇತರ ಅಕ್ರಮ ಮಾರ್ಗದ ಮೂಲಕ ಅಪಾರ ಹಣ ಸಂಗ್ರಹಿಸಿದ್ದ ಬಿಹಾರದ ನಕ್ಸಲ್‌ ಮುಖಂಡನೋರ್ವನ ಆಸ್ತಿ ಜಪ್ತಿ ಮಾಡಲಾಗಿದೆ.   

ನವದೆಹಲಿ [ಮೇ 31]: ಸಮತೆಯ ನಾಡಿಗಾಗಿ ರಕ್ತಕ್ರಾಂತಿ ಎನ್ನುತ್ತಾ ದುರ್ಮಾರ್ಗದಿಂದ ನಕ್ಸಲೀಯರು ಹಣ ಸಂಪಾದಿಸುವುದು ಹೊಸದೇನಲ್ಲ. ದರೋಡೆ ಸೇರಿದಂತೆ ಇತರ ಅಕ್ರಮ ಮಾರ್ಗದ ಮೂಲಕ ಅಪಾರ ಹಣ ಸಂಗ್ರಹಿಸಿದ್ದ ಬಿಹಾರದ ನಕ್ಸಲ್‌ ಮುಖಂಡನೋರ್ವನ ಆಸ್ತಿ ಜಪ್ತಿ ಮಾಡಲಾಗಿದೆ. 

ತನ್ನ ಅಳಿಯನ ಕುಟುಂಬಸ್ಥರ ಖಾತೆಗಳಿಗೆ ಠೇವಣಿ ಮಾಡಿದ್ದ 40 ಲಕ್ಷ ರೂ. ಕಪ್ಪುಹಣ ಸೇರಿದಂತೆ ಒಟ್ಟು 77 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. 

ಬಿನಯ್‌ ಯಾದವ್‌ ಅಲಿಯಾಸ್‌ ಕಮಲ್‌ ಜೀ ಮಾವೋವಾದಿಯ ಹಿರಿಯ ಮುಖಂಡನಾಗಿದ್ದು, ಆತನ ಆಸ್ತಿಯನ್ನು ಅಕ್ರಮ ಹಣ ವ್ಯವಹಾರ ತಡೆ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಸಂಪಾದನೆ ಮಾಡುತ್ತಿದ್ದ ಹಣವನ್ನು ಬಿನಯ್‌ ಯಾದವ್‌ ತನ್ನ ಅಳಿಯ, ತನ್ನ ಪತ್ನಿ, ತನ್ನ ತಂದೆ ಖಾತೆಗಳಿಗೆ ಹಾಕುತ್ತಿದ್ದ. 

ಈ ಹಿನ್ನೆಲೆಯಲ್ಲಿ ಔರಂಗಬಾದ್‌ ಜಿಲ್ಲೆಯಲ್ಲಿರುವ 6 ಪ್ಲಾಟ್‌ಗಳು, 3 ಬಸ್‌ಗಳು, ಬೊಲೆರೊ ಎಸ್‌ಯುವಿ ಕಾರು, ಮಿನಿ ವ್ಯಾನ್‌ ಮತ್ತು 7 ಬ್ಯಾಂಕ್‌ ಖಾತೆಗಳಲ್ಲಿನ ಹಣ ಸೇರಿದಂತೆ ಇತರ ಆಸ್ತಿಗಳನ್ನು ಗುರುವಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌, ಕಾರ್ಯಸಾಧ್ಯತಾ ವರದಿ ಬಗ್ಗೆ ಕರ್ನಾಟಕ ಪ್ರತಿಕ್ರಿಯೆ ನೀಡಿಲ್ಲ ಎಂದ ಕೇಂದ್ರ!