
ಬೆಂಗಳೂರು(.03): ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ದ್ವಂದ್ವ ನೀತಿ ಅನುಸರಿಸುತ್ತಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ತಮಿಳುನಾಡಿಗೆ ನೀರು ಬಿಟ್ಟ ಬಳಿಕ ನಾನು ಸುಪ್ರೀಂ ಕೋರ್ಟ್'ನಲ್ಲಿ ವಾದ ಮುಂದುವರೆಸುತ್ತೇನೆ. ಮೊದಲು ತಮಿಳುನಾಡಿಗೆ ನೀರು ಬಿಡಿ ಎಂಬುವುದಾಗಿ ಹೇಳಿದ್ದಾರೆ.
ಈ ಮೊದಲು ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ದೇವರೇ ಕಾಪಾಡಬೇಕು ಎಂದಿದ್ದ ನಾರಿಮನ್, ಇದೀಗ 'ತಮಿಳುನಾಡಿಗೆ ನೀರು ಬಿಡಿ. ನೀರು ಬಿಟ್ಟ ಬಳಿಕವಷ್ಟೇ ನಾನು ವಾದ ಮಾಡುತ್ತೇನೆ. ಇಲ್ಲವಾದರೆ ನಾನು ವಾದ ಮಾಡುವುದಿಲ್ಲ' ಎಂದಿದ್ದಾರೆ.
ಈಗಾಗಲೇ ಕಾವೇರಿ ವಿಚಾರದಲ್ಲಿ ವಕೀಲ ಫಾಲಿ ನಾರಿಮನ್'ರನ್ನು ಬದಲಾಯಿಸಬೇಕು ಎಂದು ಬಹಳಷ್ಟು ಮಂದಿ ಸೂಚಿಸಿದ್ದರು. ಇದೀಗ ಈ ಸಲಹೆಗೆ ಪುಷ್ಟಿ ನೀಡುವಂತೆ ನಾರಿಮನ್'ರವರು ವರ್ತಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.