ನವದೆಹಲಿ(ಅ.03): ಸುಪ್ರೀಂಕೋರ್ಟ್`ನಲ್ಲಿ ಕರ್ನಾಟಕ ನನ್ನ ಮಾತು ಕೇಳುತ್ತಿಲ್ಲ, ನಾನು ವಾದ ಮಾಡುವುದಿಲ್ಲ ಎಂದು ಹೇಳಿ ಬಂದಿದ್ದ ವಕೀಲ ಫಾಲಿ ನಾರಿಮನ್, ನಾನು ಇನ್ಮುಂದೆ ಕರ್ನಾಟಕದ ಪರ ವಾದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಪರವಾಗಿ ನಾರಿಮನ್ ಮನೆಗೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಕಟು ಶಬ್ದಗಳಿಂದ ತಿಳಿಸಿರುವ ನಾರಿಮನ್, ಕಲಾಪದಲ್ಲಿ ಆಡಿದ ಮಾತುಗಳಿಂದ ಬೇಸರವಾಗಿದೆ. ಇನ್ನು ನಾನು ಕರ್ನಾಟಕದ ಪರ ವಾದಿಸುವುದಿಲ್ಲ. ಇನ್ನು ಮುಂದೆ ನನ್ನ ಮನೆ ಗೇಟ್ಗೆ ಬರುವುದು ಬೇಡ. ‘ನನ್ನ ಮನೆಗೆ ಬರುವುದು ಬೇಡ ಎಂದು ಅವರಿಗೆ ಹೇಳಿ ಎಂದು ಹೇಳಿರುವುದಾಗಿ ತಿಳಿದುಬಂದಿದೆ.