
ಉಡುಪಿ(ಮಾ. 16): ಜಿಲ್ಲೆಯ ಹೆರ್ಗದಲ್ಲಿ ನಾರಾಯಣರಾವ್ ಪಾಟೀಲ್ ಎಂಬ ವೃದ್ಧರೊಬ್ಬರು ಇಹಲೋಕ ತ್ಯಜಿಸಿದ್ದಾರೆ. ಇಷ್ಟೇ ಆಗಿದ್ದರೆ ಈ ಸುದ್ದಿ ಅವರ ಗ್ರಾಮದ ಸುತ್ತಮುತ್ತಲವರೆಗೆ ಮಾತ್ರ ಸೀಮಿತವಾಗಿರುತ್ತಿತ್ತು. ರಜಿನೀಕಾಂತ್ ಸೂಪರ್'ಸ್ಟಾರ್ ಆಗುವ ಮುಂಚೆ ಅವರಿಗೆ ಬೆನ್ನೆಲುಬಾಗಿ ನಿಂತವರಲ್ಲಿ ನಾರಾಯಣರಾವ್ ಕೂಡ ಒಬ್ಬರು. ಹೀಗಾಗಿ, ನಾರಾಯಣರಾವ್ ಸಾವಿನ ಸುದ್ದಿ ಗಡಿಯಾಚೆ ತಲುಪುವಂಥದ್ದಾಗಿದೆ.
ನಾರಾಯಣ್ ಪಾಟೀಲ್ ಅವರಿಗೆ ತುಂಬಾ ಗೌರವ ಕೊಡುತ್ತಿದ್ದ ರಜನಿ, ಒಮ್ಮೆ ಅವರನ್ನು ಭೇಟಿಯಾದಾಗ ನೆನಪಿಗಾಗಿ ತನ್ನ ಇಷ್ಟ ದೇವರಾದ ಗುರು ರಾಘವೇಂದ್ರಸ್ವಾಮಿಗಳ ಫೋಟೋವನ್ನು ನೀಡಿದ್ದರಂತೆ. ಕಷ್ಟಕಾಲದಲ್ಲಿ ನೆರವಾದದ್ದನ್ನು ಸ್ಮರಿಸಿ ಅವರ ಹೆಸರಿನ ಬ್ಯಾಂಕ್ ಖಾತೆಯಲ್ಲಿ ಆಗಿನ ಕಾಲದಲ್ಲೇ ಒಂದೂವರೆ ಲಕ್ಷ ರೂಪಾಯಿ ಠೇವಣಿ ಇರಿಸಿದ್ರಂತೆ. ಆದ್ರೆ ಚೆನೈನಿಂದ ವಾಪಾಸ್ ಬಂದ ನಾರಾಯಣ ರಾವ್, 1997 ರಲ್ಲಿ ತವರೂರು ಉಡುಪಿಯ ಹೆರ್ಗದಲ್ಲಿ ಬಂದು ನೆಲೆಸುತ್ತಾರೆ.
ಕಳೆದ ವರ್ಷದ ಮೇ ತಿಂಗಳಂದು ನಾರಾಯಣ್ ರಾವ್ ಇಹಲೋಕ ತ್ಯಜಿಸಿದ್ದಾರೆ. ಈ ವಿಷಯ ರಜನೀಕಾಂತ್'ಗೆ ತಿಳಿದಿಲ್ಲ. ಅವರಿಗೆ ಈ ಸುದ್ದಿ ಮುಟ್ಟಿಸಬೇಕು ಎಂಬುದು ಅವರ ಕುಟುಂಬವರ್ಗದವರ ಅಭಿಲಾಷೆ. ಆದಷ್ಟು ಬೇಗ ಈ ವಿಷಯ ಸೂಪರ್'ಸ್ಟಾರ್ ಕಿವಿಗೆ ಬಿದ್ದು ಆ ಕುಟುಂಬವನ್ನು ಒಮ್ಮೆ ಭೇಟಿಯಾಗಲಿ ಎಂಬುದೇ ಎಲ್ಲರ ಆಶಯ.
- ಶಶಿಧರ್ ಮಾಸ್ತಿಬೈಲು, ಸುವರ್ಣ ನ್ಯೂಸ್, ಉಡುಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.