ಕೇಂದ್ರದ ಆರೋಗ್ಯ ವಿಮಾ ಯೋಜನೆಗೆ ಆಧಾರ್‌ ಮಾದರಿ: ನಿಲೇಕಣಿ ನೆರವು

Published : Feb 24, 2018, 08:34 AM ISTUpdated : Apr 11, 2018, 12:40 PM IST
ಕೇಂದ್ರದ ಆರೋಗ್ಯ ವಿಮಾ ಯೋಜನೆಗೆ ಆಧಾರ್‌ ಮಾದರಿ: ನಿಲೇಕಣಿ ನೆರವು

ಸಾರಾಂಶ

ಭಾರತದ ಪ್ರತಿ ಪ್ರಜೆಗೂ ವಿಶಿಷ್ಟಗುರುತಿನ ಚೀಟಿ ನೀಡುವ ಆಧಾರ್‌ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಇಸ್ಫೋಸಿಸ್‌ನ ಸಂಸ್ಥಾಪಕ ಸದಸ್ಯ, ಕನ್ನಡಿಗ ನಂದನ್‌ ನಿಲೇಕಣಿ, ಇದೀಗ ಕೇಂದ್ರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಜಾರಿ ಹೊಣೆ ಹೊರುವ ಸಾಧ್ಯತೆ ಇದೆ.

ನವದೆಹಲಿ: ಭಾರತದ ಪ್ರತಿ ಪ್ರಜೆಗೂ ವಿಶಿಷ್ಟಗುರುತಿನ ಚೀಟಿ ನೀಡುವ ಆಧಾರ್‌ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಇಸ್ಫೋಸಿಸ್‌ನ ಸಂಸ್ಥಾಪಕ ಸದಸ್ಯ, ಕನ್ನಡಿಗ ನಂದನ್‌ ನಿಲೇಕಣಿ, ಇದೀಗ ಕೇಂದ್ರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಜಾರಿ ಹೊಣೆ ಹೊರುವ ಸಾಧ್ಯತೆ ಇದೆ.

ಮೋದಿ ಸರ್ಕಾರ, ಇತ್ತೀಚಿನ ಬಜೆಟ್‌ನಲ್ಲಿ ಘೋಷಿಸಿದ ಬೃಹತ್‌ ಆರೋಗ್ಯ ವಿಮಾ ಯೋಜನೆ ಜಾರಿಗೆ ಅಗತ್ಯವಾದ ಐಟಿ ಮೂಲ ಸೌಕರ್ಯ ರಚನೆಗೆ, ನಂದನ ನಿಲೇಕಣಿ ಅವರ ನೆರವು ಪಡೆಯಲು ನಿರ್ಧರಿಸಿದೆ. ಸುಮಾರು 10 ಕೋಟಿ ಕುಟುಂಬಗಳ 50 ಕೋಟಿ ಜನ ಯೋಜನೆಯ ಫಲಾನುಭವಿಗಳು ಆಗಲಿರುವುದರಿಂದ ಅವರೆಲ್ಲರ ಆಧಾರ್‌ ಅಗತ್ಯವಿದ್ದು, ಅದಕ್ಕೆ ನೀಲೆಕಣಿ ಸಹಾಯ ಪಡೆಯಬೇಕಾಗಿದೆ.

ಅಲ್ಲದೆ, ಕಾರ್ಯಕ್ರಮ ಸಮರ್ಪಕವಾಗಿ ಜಾರಿಗೊಳ್ಳಲು ಬೇಕಾದ ಐಟಿ ಮೂಲಸೌಕರ್ಯಗಳನ್ನು ಕೂಡ ಪಡೆಯಲು ಉದ್ದೇಶಿಸಲಾಗಿದೆ. ನೀಲೆಕಣಿ ಜೊತೆ ಸಮಾಲೋಚನೆ ನಡೆಸಿದ್ದೇವೆ. ಎನ್‌ಎಚ್‌ಪಿಎಸ್‌ ಯೋಜನೆಗೆ ಆಧಾರ್‌ ಮಾದರಿಯ ವ್ಯವಸ್ಥೆ ಸೃಷ್ಟಿಸಬೇಕಾಗಿದೆ. ಅದಕ್ಕೆ ಅವರು ಒಪ್ಪಿದ್ದಾರೆ ಎಂದು ನೀತಿ ಆಯೋಗದ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ