ಶರಾವತಿ ಕಣಿವೆಯ ದಟ್ಟ ಕಾಡಿನ ಹೆದ್ದಾರಿಯಲ್ಲಿ ಬಸ್ ಅಡ್ಡಗಟ್ಟಿದ ಯುವಕರ ತಂಡ!

Published : Jun 06, 2019, 11:57 PM ISTUpdated : Jun 07, 2019, 12:08 AM IST
ಶರಾವತಿ ಕಣಿವೆಯ ದಟ್ಟ ಕಾಡಿನ ಹೆದ್ದಾರಿಯಲ್ಲಿ ಬಸ್ ಅಡ್ಡಗಟ್ಟಿದ ಯುವಕರ ತಂಡ!

ಸಾರಾಂಶ

ವರ್ಷಕ್ಕೆ ಒಂದು ದಿನವನ್ನು ಪರಿಸರ ದಿನ ಎಂದು ಆಚರಣೆ ಮಾಡಿ ನಾವೆಲ್ಲ ಸುಮ್ಮನಾಗುತ್ತೇವೆ.  ಫೋಟೋಗೆ ಪೋಸ್ ಕೊಡಲೆಂದು ನೆಟ್ಟ ಗಿಡ ಬದುಕಿದೆಯೋ.. ಸತ್ತಿದೆಯೋ ಎಂದು ನೋಡುವ ಗೋಜಿಗೂ ಅನೇಕರು ಹೋಗುವುದಿಲ್ಲ.  ಹಾಗಾದರೆ ಪರಿಸರ ದಿನ ಕೇವಲ ದಿನಾಚರಣೆಗೆ ಸೀಮಿತವೇ?

ಕಾರವಾರ[ಜೂ.06] ಕಾಡಂಚಿನ ದಾರಿಯಲ್ಲಿ ಬಸ್ ಸಾಗುವಾಗ ಪರಿಸರವನ್ನು ಆಸ್ವಾದಿಸುವುದಕ್ಕಿಂತ ದೊಡ್ಡ ಸುಖ ಇನ್ನೇನಿದೆ? ಆದರೆ ಅದೆ ಕಾಡಂಚನಿ ದಾರಿಗೆ ಕುಡಿದು ಖಾಲಿಯಾದ ನೀರಿನ ಬಾಟಲ್, ತಿಂದು ಖಾಲಿ ಮಾಡಿದ ಚಿಪ್ಸ್ ಪೊಟ್ಟಣ ಎಸೆಯುತ್ತ ನಮ್ಮ ಭಾರ ಇಳಿಯಿತು ಎಂದು ಮುಂದಕ್ಕೆ ಸಾಗಿ ಬಿಡುತ್ತೇವೆ.

ನಮ್ಮ ಭಾರವೇನೋ ಇಳಿಯಿತು. ಆದರೆ ನಿಸರ್ಗದ ಮೇಲೆ ಇದರ ಪರಿಣಾಮ? ಊಹಿಸಲು ಅಸಾಧ್ಯ. ಅಳಿಯದ ಕಸವಾಗಿಜೀವ ಜಲ, ಹಸಿರು ಭೂಮಿ ಸೇರಿಕೊಳ್ಳುವ ಪ್ಲಾಸ್ಟಿಕ್ ಎಂಬ ಪರಿಸರ ವಿರೋಧಿ ಕಣ್ಣಿಗೆ ಕಾಣದೇ ಕೂತು ಧೂರ್ತ ನಗೆ ಬೀರುತ್ತ ಇರುತ್ತದೆ.

ಪರಿಸರ ಕಾಪಾಡಲು ಡಿ ಬಾಸ್ ಸೂತ್ರ

ಪರಿಸರ ಉಳಿವಿಗೆ ಒಂದು ಹೆಜ್ಜೆ ಮುಂದೆ ನಿಂತು ಯೋಚನೆ ಮಾಡುತ್ತಿರುವ ನಮ್ಮ ಹೊನ್ನಾವರ ಎಂಬ ಯುವಕರ ತಂಡ ಶರಾವತಿ ಕಣಿವೆ ಮತ್ತು ಹೊನ್ನಾವರ ಮಾರ್ಗದಲ್ಲಿ ಸಂಚರಿಸುವ ಬಸ್ ಗಳಿಗೆ ಏರಿ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಯುವಕರ ಕೆಲಸಕ್ಕೊಂದು ಸಲಾಂ ಹೇಳಲೇಬೇಕು.

ನೀವು ಕೂಡಾ ಪ್ಲಾಸ್ಟಿಕ್ ಎಸೆಯಬೇಡಿ..ಎಸೆಯಲು ಬೀಡಬೇಡಿ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉ.ಕರ್ನಾಟಕ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ: ವಿಜಯೇಂದ್ರ
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌