
ಬೆಂಗಳೂರು(ಫೆ.19): ಉದ್ಯಮಿಯೊಬ್ಬರ ಪುತ್ರ ವಿದ್ಯತ್ ಮೇಲೆ ಹಲ್ಲೆ ಪೊಲೀಸ್ ವಶದಲ್ಲಿರುವ ಶಾಂತಿನಗರದ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್'ನನ್ನು 8ನೇ ಎಪಿಎಂಸಿ ನ್ಯಾಯಾಲಯ 2 ದಿನಗಳ ಕಾಲ ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ ನೀಡಿದೆ.
ನಲಪಾಡ್ ಸೇರಿದಂತೆ ಹಲ್ಲೆಯಲ್ಲಿ ಭಾಗಿಯಾಗಿ 7 ಮಂದಿಯನ್ನು ಫೆ.21ರವರೆಗೂ ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ ನೀಡಲಾಗಿದೆ. 8 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡುವಂತೆ ಸಿಸಿಬಿ ಪರ ವಕೀಲರು ಕೋರಿದ್ದರು. ಆದರೆ 2 ದಿನಗಳ ಕಾಲ ಮಾತ್ರ ನೀಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ತೊಂದರೆ ನೀಡಿದರೆ ಎಂದು ಕೇಳಲಾಯಿತು. ಈ ಪ್ರಶ್ನೆಗೆ ನಲ'ಪಾಡ್'ನಿಂದ ಇಲ್ಲ ಎಂದು ಉತ್ತರ ನೀಡಿದ್ದಾನೆ.
ಸಿಸಿಬಿ ವಶದಲ್ಲಿದ್ದಾಗ ಮಾಧ್ಯಮದವರ ಮೇಲೆ ಹಲ್ಲೆ
ಸಿಸಿಬಿ ಪೊಲೀಸ್ ವಶದಲ್ಲಿದ್ದಾಗ ಮಾಧ್ಯಮದವರು ಚಿತ್ರೀಕರಣ ಮಾಡುತ್ತಿದ್ದಾಗ ಮಾಧ್ಯಮ ಪ್ರತಿನಿಧಿಯ ಛಾಯಾಗ್ರಾಹಕರೊಬ್ಬರ ಮೇಲೆ ನಲಪಾಡ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಒಂದು ಕ್ಯಾಮರಾವನ್ನು ಕೂಡ ಜಖಂಗೊಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.