
ರಾಯಪುರ(ಫೆ.19):ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್'ಸನ್ ಭಾರತದಲ್ಲಿ ಅನಾಥ ಚಿರತೆ ಮರಿಯನ್ನು ದತ್ತುಪಡೆಯುವ ಮೂಲಕ ಭಾರತೀಯ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ರಾಯಪುರದಲ್ಲಿ ಚಿರತೆ ಮರಿಯೊಂದನ್ನು ದತ್ತು ಪಡೆದಿದ್ದು, ಮುಂದಿನ ತಿಂಗಳು ಹೊಸ ಅತಿಥಿಯನ್ನು ಭೇಟಿ ಮಾಡುವುದಾಗಿ ಕೆಪಿ ತಿಳಿಸಿದ್ದಾರೆ. ಅಲ್ಲದೇ ಚಿರತೆ ಮರಿಗೆ ಏನೆಂದು ಹೆಸರಿಡಲಿ ಎಂದು ಅಭಿಮಾನಿಗಳ ಬಳಿ ಸಲಹೆ ಕೇಳಿದ್ದಾರೆ.
ಕಳೆದ ಜನವರಿಯೊಂದರಲ್ಲೇ ಭಾರತದಲ್ಲಿ ಸುಮಾರು 40 ಚಿರತೆಗಳನ್ನು ಸಾಯಿಸಲಾಗಿತ್ತು. ಅದರಲ್ಲಿ 1/3ರಷ್ಟು ಚಿರತೆಗಳನ್ನು ಕಳ್ಳಬೇಟೆಗಾರರು ಚಿರತೆಗಳನ್ನು ಸಾಯಿಸಿದ್ದು ಕೆಲವಾರಗಳ ಹಿಂದಷ್ಟೇ ಪೀಟರ್'ಸನ್ ಗಮನಕ್ಕೆ ಬಂದಿದೆ. ಆ ಬಳಿಕ ಚಿರತೆಗಳನ್ನು ಉಳಿಸಲು ಚಿರತೆ ಮರಿಯನ್ನು ದತ್ತು ಪಡೆದಿರುವುದಾಗಿ ಪೀಟರ್'ಸನ್ ಇನ್'ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.