
ಬೆಂಗಳೂರು : ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪುಂಡಾಟಿಕೆ ಮೆರೆದು ಶರಣಾಗಲು ಒಪ್ಪದೇ ಪರಾರಿಯಾಗಿದ್ದ. ಆದರೆ ಆತನನ್ನು ಶರಣಾಗುವಂತೆ ಮಾಡಿಸಿದ್ದರ ಹಿಂದೆ ಸೀಕ್ರೆಟ್ ಒಂದು ಅಡಗಿದೆ ಎನ್ನಲಾಗಿದೆ.
ಶಾಸಕ ಹ್ಯಾರಿಸ್ ರಾಜಕೀಯ ಭವಿಷ್ಯಕ್ಕಾಗಿ ನಲಪಾಡ್ ಶರಣಾಗುವಂತೆ IPS ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇಬ್ಬರು ಐಜಿ ದರ್ಜೆಯ ಅಧಿಕಾರಿಗಳ ಸಲಹೆ ಪಡೆದಿದ್ದ ಶಾಸಕ ಹ್ಯಾರಿಸ್ ಮಗನನ್ನು ಶರಣಾಗುವಂತೆ ಸೂಚನೆ ನೀಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ಐಪಿಎಸ್ ಅಧಿಕಾರಿಗಳಿಂದ ಹ್ಯಾರಿಸ್ ಸಲಹೆ ಪಡೆದುಕೊಂಡಿದ್ದರು ಎನ್ನಲಾಗಿದೆ.
ಆದರೆ ಆತ ಮಾತ್ರ ಜಾಮೀನು ಸಿಗುವವರೆಗೂ ನಾನು ಬರುವುದಿಲ್ಲ ಎಂದು ಹಠ ಹಿಡಿದಿದ್ದ. ನಲಪಾಡ್ ಪಟಾಲಂ ಮೂಲಕ ಮಗನನ್ನು ಕರೆಸಿಕೊಂಡು ಹ್ಯಾರಿಸ್ ಸರೆಂಡರ್ ಮಾಡಿಸಿದ್ದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.