
ಬೆಂಗಳೂರು : ಜಾಮೀನು ಸಿಗದ್ದಕ್ಕೆ ವಿಚಲಿತನಾಗಿದ್ದ ನಲಪಾಡ್ಗೆ ಜೈಲಲ್ಲಿ ಗುಂಡು ಸಿಗರೇಟ್ ನೀಡಲಾಗಿದೆ ಎನ್ನಲಾಗುತ್ತಿದೆ. ರಾತ್ರಿ ಜೈಲಿನಲ್ಲಿದ್ದ ನಲಪಾಡ್ಗೆ ರಮ್ ಜೊತೆಗೆ ಸಿಗರೇಟ್ ಜೈಲು ಸಿಬ್ಬಂದಿ ಕೊಟ್ಟಿದ್ದರಾ ಎನ್ನುವ ಶಂಕೆ ಇದೀಗ ಮೂಡಿದೆ.
ಉದ್ಯಮಿ ಪುತ್ರನ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ಹ್ಯಾರಿಸ್ ಪುತ್ರ ನಲಪಾಡ್ಗೆ ಜೈಲಿನಲ್ಲೇ ರಾಜಾತಿಥ್ಯ ಕೊಡುತ್ತಿದ್ದಾರಾ ಎನ್ನುವ ಶಂಕೆಯೂ ಕೂಡ ಹುಟ್ಟಿಕೊಂಡಿದೆ.
ಜಾಮೀನು ಸಿಗದ ಹಿನ್ನೆಲೆಯಲ್ಲಿ ಹೆಚ್ಚು ಟೆನ್ಷನ್’ಗೆ ಒಳಗಾದ ಹಿನ್ನೆಲೆಯಲ್ಲಿ ರಾತ್ರಿ ಜೈಲಿನಲ್ಲಿ ನಲಪಾಡ್ ಚೆಸ್ ಆಡುತ್ತಾ ಕಾಲ ಕಳೆದಿದ್ದಾನೆ. ಆರೋಪಿ ಅಭಿಷೇಕ್ ಜೊತೆ ರಾತ್ರಿ 1 ಗಂಟೆವರೆಗೂ ನಲಪಾಡ್ ಚೆಸ್ ಆಡಿದ್ದಾನೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.