
ಚೆನ್ನೈ(ಮೇ 31): ಇನ್ಫೋಸಿಸ್ ಸಂಸ್ಥೆಯ ಕ್ಯಾಂಪಸ್'ನಲ್ಲಿ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಮಹೀಂದ್ರಾ ವರ್ಲ್ಡ್ ಸಿಟಿ ಕ್ಯಾಂಪಸ್'ನಲ್ಲಿರುವ ಇನ್ಫೋಸಿಸ್'ನ ಕಚೇರಿಯಲ್ಲಿ 32 ವರ್ಷದ ಇಳಯರಾಜ ಅರುಣಾಚಲಂ ಅವರ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೆನ್ನೈ ಹೊರವಲಯದ ತಿಂಡಿವನಂ ನಿವಾಸಿಯಾದ ಇಳಯರಾಜಾ ಅವರು ಸೋಮವಾರ ರಾತ್ರಿ ಇನ್ಫೋಸಿಸ್ ಕಚೇರಿಯೊಳಗಿರುವ ರೆಸ್ಟ್'ರೂಮ್'ನಲ್ಲಿ 10:45ರ ವೇಳೆಯಲ್ಲಿ ಮೃತಪಟ್ಟಿರುವ ಶಂಕೆ ಇದೆ. ಆದರೆ, ಯಾವುದೇ ಸ್ಯೂಸೈಡ್ ನೋಟ್ ಸಿಕ್ಕಿಲ್ಲ.
ಇಳಯರಾಜಾ ಅವರ ಪತ್ನಿ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.