ಪ್ರಿಯಕರನ ಅನುಮಾನ ರೋಗಕ್ಕೆ ಬೇಸತ್ತ ಯುವತಿಯಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ!

Published : Nov 25, 2016, 07:04 AM ISTUpdated : Apr 11, 2018, 01:06 PM IST
ಪ್ರಿಯಕರನ ಅನುಮಾನ ರೋಗಕ್ಕೆ ಬೇಸತ್ತ ಯುವತಿಯಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ!

ಸಾರಾಂಶ

ಅನಿತಾ ಕಳೆದ ಕೆಲವು ವರ್ಷಗಳಿಂದ ರವಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಅನಿತಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧವನ್ನೂ ಲೆಕ್ಕಿಸದೆ ಅನಿತಾ ಮನೆ ಬಿಟ್ಟು ರವಿ ಮನೆ ಸೇರಿದ್ದಳು. ಮದುವೆ ಅಗುವುದಾಗಿ ನಂಬಿಸಿ ರವಿ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಅನಿತಾ ಶೀಲದ ಬಗ್ಗೆ ಅನುಮಾನಗೊಂಡು ವಂಚಿಸಿದ್ದ. ಈ ವಿಚಾರದಿಂದ ಬೇಸತ್ತ ಅನಿತಾ ಭಾನುವಾರ ಮೈಸೂರಿನ ಹೂಟಗಳ್ಳಿ ಮನೆಯಲ್ಲಿ ಸಿಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಮೈಸೂರು(ನ.25):ಪ್ರಿಯಕರನ ಅನುಮಾನ ರೋಗಕ್ಕೆ ಬೇಸತ್ತು ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು 19 ವರ್ಷದ ಅನಿತಾ ಎಂದು ಗುರುತಿಸಲಾಗಿದೆ.

ಅನಿತಾ ಕಳೆದ ಕೆಲವು ವರ್ಷಗಳಿಂದ ರವಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಅನಿತಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧವನ್ನೂ ಲೆಕ್ಕಿಸದೆ ಅನಿತಾ ಮನೆ ಬಿಟ್ಟು ರವಿ ಮನೆ ಸೇರಿದ್ದಳು. ಮದುವೆ ಅಗುವುದಾಗಿ ನಂಬಿಸಿ ರವಿ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಅನಿತಾ ಶೀಲದ ಬಗ್ಗೆ ಅನುಮಾನಗೊಂಡು ವಂಚಿಸಿದ್ದ. 

ಈ ವಿಚಾರದಿಂದ ಬೇಸತ್ತ ಅನಿತಾ ಭಾನುವಾರ ಮೈಸೂರಿನ ಹೂಟಗಳ್ಳಿ ಮನೆಯಲ್ಲಿ ಸಿಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೆ.ಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ಗಗನಯಾನ್‌ ಮಿಷನ್‌ ಲ್ಯಾಡಿಂಗ್‌ ಪ್ಯಾರಚೂಟ್‌ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ
ಚಾಮರಾಜನಗರದಲ್ಲಿ 5 ಹುಲಿಗಳ ಹಾವಳಿ: ರೈತರ ಆಕ್ರೋಶ, ಡ್ರೋನ್ ಶೋಧಕ್ಕೆ ಅರಣ್ಯ ಇಲಾಖೆ ಸಿದ್ಧ!