
ನವದೆಹಲಿ[ಜು.21]: ಸಮಾಜವಾದಿ ಪಕ್ಷದ ಸಂಸದ ಆಜಂಖಾನ್ ಮತ್ತೆ ವಿವಾದಿತ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ.
1947ರ ಭಾರತ-ಪಾಕಿಸ್ತಾನ ದೇಶಗಳ ಇಬ್ಭಾಗದ ವೇಳೆ ಪಾಕಿಸ್ತಾನಕ್ಕೆ ಹೊರಟುನಿಂತ ಮುಸ್ಲಿಮರನ್ನು ಮೌಲಾನಾ ಅಜಾದ್, ಜವಾಹರ್ಲಾಲ್ ನೆಹರೂ, ಸರ್ದಾರ್ ಪಟೇಲ್, ಮಹಾತ್ಮಾ ಗಾಂಧೀಜಿ ಪಾಕ್ಗೆ ಹೋಗದಂತೆ ಮನವಿ ಮಾಡಿದರು. ಈ ಕಾರಣಕ್ಕಾಗಿ ಮುಸ್ಲಿಮರು ಭಾರತದಲ್ಲೇ ಉಳಿದುಕೊಂಡರು. ಮುಸ್ಲಿಮರು ಭಾರತವನ್ನು ತಮ್ಮ ರಾಷ್ಟ್ರ ಎಂದೇ ಭಾವಿಸಿದರು. ಆದರೆ, ಈ ಭಾವನೆಯೇ ಮುಸ್ಲಿಮರಿಗೆ ಇಂದು ಮುಳುವಾಗಿದೆ. ಈ ರಾಷ್ಟ್ರದಲ್ಲಿ ಅವರು ಘನತೆಯಿಂದ ಬದುಕುವುದು ಕಷ್ಟವಾಗಿದೆ.
ಭಾರತ- ಪಾಕಿಸ್ತಾನ ಇಬ್ಭಾಗದ ದಿನದಿಂದಲೂ ಅಸಹ್ಯಕರ ಜೀವನವನ್ನು ಮುಸ್ಲಿಮರು ಸಾಗಿಸುತ್ತಿದ್ದಾರೆ. ಇದಕ್ಕೆ ನಾವು ನಾಚಿಕೆಪಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.