ಫ್ಲೆಕ್ಸ್ ಗಳಲ್ಲಿ ಮುಖ್ಯಮಂತ್ರಿ ಪದವೇ ಮಾಯ!

Published : Jul 21, 2019, 09:05 AM IST
ಫ್ಲೆಕ್ಸ್ ಗಳಲ್ಲಿ ಮುಖ್ಯಮಂತ್ರಿ ಪದವೇ ಮಾಯ!

ಸಾರಾಂಶ

ರಾಮನಗರದ ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮವೊಂದರ ಫ್ಲೆಕ್ಸ್‌, ಕಟೌಟ್‌ಗಳಲ್ಲಿ ಕುಮಾರಸ್ವಾಮಿಯವರ ಹೆಸರಿನೊಂದಿಗೆ ‘ಮುಖ್ಯಮಂತ್ರಿ’ ಪದವನ್ನು ಮುದ್ರಿಸದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ರಾಮ​ನ​ಗರ (ಜು. 21): ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ನಡುವೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಅಲ್ಪಮತಕ್ಕೆ ಕುಸಿಯುವ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಗೊಂದಲಕ್ಕೊಳಗಾಗಿರುವ ರಾಮನಗರದ ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮವೊಂದರ ಫ್ಲೆಕ್ಸ್‌, ಕಟೌಟ್‌ಗಳಲ್ಲಿ ಕುಮಾರಸ್ವಾಮಿಯವರ ಹೆಸರಿನೊಂದಿಗೆ ‘ಮುಖ್ಯಮಂತ್ರಿ’ ಪದವನ್ನು ಮುದ್ರಿಸದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ರಾಮನಗರದಲ್ಲಿ ಜುಲೈ 23ರಂದು ಆಚರಿಸಲಾಗುತ್ತಿರುವ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋ​ತ್ಸ​ವದ ಪ್ರಯುಕ್ತ ನಡೆ​ಯುವ ಸಂಗೀತ ನೃತ್ಯ ಸಂಭ್ರ​ಮಕ್ಕೆ ಸ್ವಾಗತ ಕೋರುವ ಕು​ಮಾ​ರ​ಸ್ವಾಮಿ ಭಾವ ಚಿ​ತ್ರ​ವಿರುವ ದೊಡ್ಡ ದೊಡ್ಡ ಫ್ಲೆಕ್ಸ್‌ ಮತ್ತು ಕಟೌಟ್‌ಗಳನ್ನು ನಗ​ರದ ಪ್ರಮುಖ ವೃತ್ತ ಹಾಗೂ ರಸ್ತೆ ಬದಿ​ಯಲ್ಲಿ ಅಳ​ವ​ಡಿ​ಸ​ಲಾ​ಗು​ತ್ತಿ​ದೆ.

ಅವುಗಳಲ್ಲಿ ‘ಎಚ್‌.ಡಿ.​ಕು​ಮಾ​ರ​ಸ್ವಾಮಿ ಮತ್ತು ಅಭಿ​ಮಾ​ನಿ​ಗಳು’ ಎಂದು ಉಲ್ಲೇಖಿ​ಸ​ಲಾ​ಗಿ​ದೆಯೇ ಹೊರತು ಎಲ್ಲಿಯೂ ‘ಮುಖ್ಯ​ಮಂತ್ರಿ​ಗಳು’ ಎಂಬ ಪದ​ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.

ಸೋಮ​ವಾ​ರದ ವಿಶ್ವಾ​ಸ​ ಮತಯಾಚನೆ ನಂತರ ಕುಮಾ​ರ​ಸ್ವಾಮಿ ಮುಖ್ಯ​ಮಂತ್ರಿ​ಗ​ಳಾಗಿ ಉಳಿ​ಯು​ತ್ತಾರೊ ಇಲ್ಲವೊ ಎಂಬ ಅನು​ಮಾನ ಬಹು​ಶಃ ಜೆಡಿ​ಎಸ್‌ ನಾಯ​ಕರು ಮತ್ತು ಕಾರ್ಯ​ಕ​ರ್ತ​ರಿಗೂ ಕಾಡತೊಡಗಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ