
ಹುಬ್ಬಳ್ಳಿ(ಸೆ.6) ಧಾರ್ಮಿಕ ಭಾವನೆ ಕೆರಳಿಸುವ ರೀತಿಯಲ್ಲಿ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೋಲಿಸರು ಶರೀಫ್ ಸಾಬ್ ರಾಜೇಸಾಬ್ ನದಾಫ್ ಎಂಬಾತನನ್ನು ಧಾರ್ಮಿಕ ಭಾವನೆ ಕೆಳಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಹಿಂದುಗಳು ಶ್ರೇಷ್ಠ ಸ್ಥಾನ ನೀಡುವ ಹನುಮಂತ ದೇವರನ್ನು ತನ್ನ ಕಾಲಿಗೆ ಬೀಳಿಸಿಕೊಳ್ಳುವ ರೀತಿಯ ಚಿತ್ರವನ್ನು ಆಧುನಿಕ ಅಪ್ಲಿಕೇಶನ್ ಬಳಸಿ ಚಿತ್ರಿಸಿಕೊಂಡಿದ್ದಾನೆ. ಸಾರ್ವಜನಿಕರು ನೀಡಿದ ಮಾಹಿತಿ ಮೇಲೆ ಪೋಲಿಸರು ಸ್ವತಃ ಪ್ರಕರಣ ದಾಖಲಿಸಿಕೊಂಡು ಈ ಕ್ರಮ ಕೈಗೊಂಡಿದ್ದಾರೆ.
ಹಾಗಾದರೆ ಸೋಶಿಯಲ್ ಮೀಡಿಯಾದಲ್ಲಿ ಏನು ಬೇಕಾದರೂ ಅಪ್ ಲೋಡ್ ಮಾಡಬಹುದು? ಇದಕ್ಕೆ ಯಾರ ಹಿಡಿತಡೆಯೂ ಇಲ್ಲವೇ? ಅಥವಾ ಇಂಥ ಅಸಂಬದ್ಧ ಚಿತ್ರಗಳ ಪೋಸ್ಟ್ ಮಾಡುವಾಗ ಏನಾದರೂ ಸೂಚನೆಗಳು ಬರುತ್ತವೆಯೇ? ಸೋಶಿಯಲ್ ಮೀಡಿಯಾ ತಜ್ಞರೇ ಉತ್ತರಿಸಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.