1 ರು.ಗಾಗಿ ನಡೆದ ಗಲಾಟೆ : ಕೊಲೆಯಲ್ಲಿ ಅಂತ್ಯ

Published : Feb 04, 2018, 10:32 AM ISTUpdated : Apr 11, 2018, 12:42 PM IST
1 ರು.ಗಾಗಿ ನಡೆದ ಗಲಾಟೆ : ಕೊಲೆಯಲ್ಲಿ ಅಂತ್ಯ

ಸಾರಾಂಶ

ಕೇವಲ 1 ರು. ಗಲಾಟೆಗೆ ವ್ಯಕ್ತಿಯೊಬ್ಬರು ಇಲ್ಲಿನ ಕಲ್ಯಾಣ್‌ನಲ್ಲಿ ಬಲಿಯಾಗಿದ್ದಾರೆ. ರಾಮ್ ಬಾಗ್ ಪ್ರದೇಶದಲ್ಲಿನ ತಮ್ಮ ಮನೆಪಕ್ಕದ ಅಂಗಡಿಯಿಂದ ಮೊಟ್ಟೆ ತರಲೆಂದು ಮನೋಹರ್ ಗಾಮ್ನೆ (54) ತೆರಳಿದ್ದರು. ಗಾಮ್ನೆ ಅಂಗಡಿಯಾತನಿಗೆ 1 ರು. ಕಡಿಮೆ ನೀಡಿದ ಕಾರಣಕ್ಕಾಗಿ ಜಗಳ ಆರಂಭವಾಗಿತ್ತು.

ಥಾಣೆ: ಕೇವಲ 1 ರು. ಗಲಾಟೆಗೆ ವ್ಯಕ್ತಿಯೊಬ್ಬರು ಇಲ್ಲಿನ ಕಲ್ಯಾಣ್‌ನಲ್ಲಿ ಬಲಿಯಾಗಿದ್ದಾರೆ. ರಾಮ್ ಬಾಗ್ ಪ್ರದೇಶದಲ್ಲಿನ ತಮ್ಮ ಮನೆಪಕ್ಕದ ಅಂಗಡಿಯಿಂದ ಮೊಟ್ಟೆ ತರಲೆಂದು ಮನೋಹರ್ ಗಾಮ್ನೆ (54) ತೆರಳಿದ್ದರು. ಗಾಮ್ನೆ ಅಂಗಡಿಯಾತನಿಗೆ 1 ರು. ಕಡಿಮೆ ನೀಡಿದ ಕಾರಣಕ್ಕಾಗಿ ಜಗಳ ಆರಂಭವಾಗಿತ್ತು.

ಗಾಮ್ನೆ ವಿರುದ್ಧ ಅಂಗಡಿ ಮಾಲೀಕ ಕೂಗಾಡಿದ. ಅದನ್ನು ಕೇಳಿಸಿಕೊಂಡು ತೆರಳಿದ್ದ ಗಾಮ್ನೆ, ಮತ್ತೆ ಮಗನೊಂದಿಗೆ ಬಂದು, ತನ್ನನ್ನು ನಿಂದಿಸಿದುದಕ್ಕೆ ಕಾರಣ ಕೇಳಿದ್ದಾರೆ. ಇದು ಇನ್ನೊಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಿದೆ. ಈ ವೇಳೆ ಅಂಗಡಿ ಮಾಲೀಕನ ಮಗ, ಗಾಮ್ನೆ ಮೇಲೆ ಹಲ್ಲೆ ನಡೆಸಿದ್ದು, ಇದು ಗಾಮ್ನೆಯ ಸಾವಿಗೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ
ಮಾದಪ್ಪ ಮೆಸ್‌ನಲ್ಲಿ ಮುದ್ದೆ ಬಡಿಸೋದು ಅಶುಚಿ; ಟೀಕಿಸಿದವರ ಬೌದ್ಧಿಕ ಬಡತನ ಬಯಲಿಗೆಳೆದ ಕಾರ್ತಿಕ್ ರೆಡ್ಡಿ!