ಬಾಲಿವುಡ್ ನಿರ್ದೇಶಕನನ್ನು ಕೊಲ್ಲಲು ಸುಪಾರಿ ನೀಡಿದ 'ಪ್ರೀತಿ'ಗೆ 4 ವರ್ಷ ಜೈಲು

Published : Apr 28, 2017, 11:59 AM ISTUpdated : Apr 11, 2018, 12:53 PM IST
ಬಾಲಿವುಡ್ ನಿರ್ದೇಶಕನನ್ನು ಕೊಲ್ಲಲು ಸುಪಾರಿ ನೀಡಿದ 'ಪ್ರೀತಿ'ಗೆ 4 ವರ್ಷ ಜೈಲು

ಸಾರಾಂಶ

2005ರಲ್ಲಿ  ಬಂಡಾರ್'ಕರ್ ಅವರನ್ನು ಕೊಲ್ಲಲು  ಭೂಗತ ದೊರೆ ಅರುಣ್ ಗೌಳಿಯ ಸಹಚರರಾದ ನರೇಶ್ ಪರದೇಶಿ ಹಾಗೂ ಶಿವರಾಮ್ ದಾಸ್ ಎಂಬುವವರಿಗೆ 75 ಸಾವಿರ ರೂ.ಗೆ ಸುಪಾರಿ ನೀಡಿದ್ದಳು. ಸುಪಾರಿ ಕೊಲೆಗಾರರಿಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಮುಂಬೈ(ಏ.28): ಬಾಲಿವುಡ್ ಸಿನಿಮಾ ನಿರ್ದೇಶಕ ಮಧೂರ್ ಬಂಡಾರ್'ಕರ್ ಅವರನ್ನು ಕೊಲ್ಲಲು ಭೂಗತದೊರೆಯ ಸಹಚರರಿಗೆ ಸುಫಾರಿ ನೀಡಿದ್ದ ಅಪರಾಧಕ್ಕಾಗಿ ಮುಂಬೈ ಮೂಲದ ಮಾಡೆಲ್ ಪ್ರೀತಿ ಜೈನ್ ಎಂಬುವವಳಿಗೆ ಸ್ಥಳೀಯ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ಅನಿರೀಕ್ಷಿತ ಬೆಳವಣಿಗೆಯಂಬಂತೆ ಮಾಡೆಲ್ ಜಾಮೀನು ದೊರೆತಿದ್ದು, ಶಿಕ್ಷೆ 4 ವಾರಗಳ ಕಾಲ ಮುಂದೂಡಲ್ಪಟ್ಟಿದೆ. ಪ್ರೀತಿ ಜೈನ್ 2005ರಲ್ಲಿ  ಬಂಡಾರ್'ಕರ್ ಅವರನ್ನು ಕೊಲ್ಲಲು  ಭೂಗತ ದೊರೆ ಅರುಣ್ ಗೌಳಿಯ ಸಹಚರರಾದ ನರೇಶ್ ಪರದೇಶಿ ಹಾಗೂ ಶಿವರಾಮ್ ದಾಸ್ ಎಂಬುವವರಿಗೆ 75 ಸಾವಿರ ರೂ.ಗೆ ಸುಪಾರಿ ನೀಡಿದ್ದಳು. ಸುಪಾರಿ ಕೊಲೆಗಾರರಿಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಒಂದು ವರ್ಷದ ನಂತರ ಅದೇ ನಿರ್ದೇಶಕನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಳು. ಸುಪಾರಿಗಾರರು ತಮ್ಮ ಕೆಲಸ ಮಾಡದ ಕಾರಣ ಅರುಣ್ ಗೌಳಿಯಿಂದ ಹಣ ವಾಪಸ್ ಸಹ ಕೇಳಿದ್ದಳು. ನಂತರ ಆತನೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಬಾಲಿವುಡ್ ಖ್ಯಾತ ನಿರ್ದೇಶಕರಾದ ಮಧೂರ್ ಬಂಡಾರ್'ಕರ್ ಪೇಜ್ 3, ಚಾಂದಿನಿ ಬಾರ್, ಟ್ರಾಫಿಕ್ ಸಿಗ್ನಲ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!