ಸಮಾಜವಾದಿ ಪಕ್ಷದಿಂದ ರಾಮಗೋಪಾಲ್ ಯಾದವ್ ಇನ್ನೊಮ್ಮೆ ಔಟ್...!!!

Published : Dec 31, 2016, 10:50 PM ISTUpdated : Apr 11, 2018, 12:58 PM IST
ಸಮಾಜವಾದಿ ಪಕ್ಷದಿಂದ ರಾಮಗೋಪಾಲ್ ಯಾದವ್ ಇನ್ನೊಮ್ಮೆ ಔಟ್...!!!

ಸಾರಾಂಶ

ಮುಲಾಯಂ ಸಿಂಗ್ ಯಾದವ್ ಅವರು ಡಿ.30 ರಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ರಾಮಗೋಪಾಲ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಿ ನಂತರ ಡಿ.31 ರಂದು ಉಚ್ಚಾಟನೆಯನ್ನು ರದ್ದುಗೊಳಿಸಿದ್ದರು.

ಲಕ್ನೋ (ಜ.01):  ಸಮಾಜವಾದಿ ಪಕ್ಷದಲ್ಲಿ ‘ಉಚ್ಛಾಟನೆ’ ರಾಜಕೀ ಮುಂದುವರೆದಿದೆ. ಇನ್ನೊಂದು ನಾಟಕೀಯ ಬೆಳವಣಿಗೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್’ರನ್ನು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮತ್ತೊಮ್ಮೆ ಉಚ್ಛಾಡಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರು ಡಿ.30 ರಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ರಾಮಗೋಪಾಲ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಿ ನಂತರ ಡಿ.31 ರಂದು ಉಚ್ಚಾಟನೆಯನ್ನು ರದ್ದುಗೊಳಿಸಿದ್ದರು.

ಆ ಬಳಿಕ ಇಂದು ಬೆಳಗ್ಗೆ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಕರೆದಿದ್ದ ರಾಮಗೋಪಾಲ್, ಪಕ್ಷವು ಅಖಿಲೇಶ್ ಯಾದವ್ ಅವರನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದಉ ಘೋಷಿಸಿದ್ದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಸಮಾಲೋಚಿಸದೇ ರಾಮಗೋಪಾಲ್ ಕರೆದಿರುವ ಸಭೆಯು ಅಸಾಂವಿಧಾನಿಕವಾಗಿದೆ, ಹಾಗೂ ಆ ಸಭೆಯ ನಿರ್ಣಯಗಳಿಗೂ ಯಾವುದೇ ಬೆಲೆಯಿಲ್ಲವೆಂದಿರುವ ಮುಲಾಯಂ ಸಿಂಗ್ ರಾಮಗೋಪಾಲ್ ಅವರನ್ನು ಇನ್ನೊಮ್ಮೆ 6 ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಛಾಟಿಸಿದ್ದಾರೆ.

ಈ ಮೂಲಕ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ತಾನೇ ಆಗಿದ್ದೇನೆಂದು ಮುಲಾಯಂ ಸಿಂಗ್ ಸ್ಪಷ್ಟಪಡಿಸಿದ್ದಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!