ಒಂದಾದ ಸಹೋದರರು; ಅನಿಲ್ ಅಂಬಾನಿ ನೆರವಿಗೆ ಧಾವಿಸಿದ ಮುಕೇಶ್

Published : Dec 29, 2017, 11:51 AM ISTUpdated : Apr 11, 2018, 01:08 PM IST
ಒಂದಾದ ಸಹೋದರರು; ಅನಿಲ್ ಅಂಬಾನಿ ನೆರವಿಗೆ ಧಾವಿಸಿದ ಮುಕೇಶ್

ಸಾರಾಂಶ

ನಷ್ಟದ ಸುಳಿಗೆ ಸಿಲುಕಿರುವ ಸೋದರ ಅನಿಲ್ ಅಂಬಾನಿ ಸಹಾಯಕ್ಕೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಧಾವಿಸಿದ್ದಾರೆ.

ನವದೆಹಲಿ(ಡಿ.29): ನಷ್ಟದ ಸುಳಿಗೆ ಸಿಲುಕಿರುವ ಸೋದರ ಅನಿಲ್ ಅಂಬಾನಿ ಸಹಾಯಕ್ಕೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಧಾವಿಸಿದ್ದಾರೆ.

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ (ಆರ್‌ಕಾಮ್)ನ ಸ್ಪೆಕ್ಟ್ರಂ, ಮೊಬೈಲ್ ಟವರ್‌'ಗಳು ಮತ್ತು ಆಪ್ಟಿಕಲ್  ಸೈಬರ್ ನೆಟ್'ವರ್ಕ್ ಸೇರಿದಂತೆ ಮೊಬೈಲ್ ಆಸ್ತಿಗಳನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸ್ವಾಧೀನ ಪಡಿಸಿಕೊಳ್ಳಲಿದೆ. ರಿಲಯನ್ಸ್ ಕಮ್ಯುನಿಕೇಶನ್'ನ  ನಿರ್ದಿಷ್ಟ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್‌'ನ ಅಂಗ ಸಂಸ್ಥೆ ರಿಲಯನ್ಸ್  ಜಿಯೋ ಗುರುವಾರ ಪ್ರಕಟಿಸಿದೆ. ಈ ಒಪ್ಪಂದದಿಂದಾಗಿ 45,000 ಕೋಟಿ ರೂ. ಸಾಲದ ಸುಳಿಗೆ ಸಿಲುಕಿರುವ ಆರ್'ಕಾಮ್‌'ಗೆ ನಿರಾಳತೆ ಸಿಕ್ಕಂತಾಗಿದೆ. ಅಲ್ಲದೇ ರಿಲಯನ್ಸ್ ಜೊಯೋ ವೈರ್‌'ಲೆಸ್ ಮತ್ತು  ಸೈಬರ್ ಟು ಹೋಮ್ ಹಾಗೂ ಉದ್ಯಮ ಸೇವೆಗಳನ್ನು ಪರಿಚಯಿಸಲು ಈ ಒಪ್ಪಂದ ನೆರವು ನೀಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!