
ಬಾಗಲ ಕೋಟೆ(ಅ.20): ಕಾಲೇಜು ವಿದ್ಯಾರ್ಥಿನಿಯೋಬ್ಬಳು ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ನಗರದ ವಿದ್ಯಾಗಿರಿಯಲ್ಲಿರೋ ಮಲಪ್ರಭಾ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದ್ದು, ಎಂಟೆಕ್ ಪದವಿಯಲ್ಲಿ 2ನೇ ವರ್ಷದಲ್ಲಿ ಓದುತ್ತಿದ್ದ ರಿಜಿನಾ ಪ್ರಾಥಿಮಾ ಆತ್ಮಹತ್ಯೆ ಮಾಡಿಕೊಂಡಿರೋ ದುರ್ದೈವಿ. ಇಂದು ಮದ್ಯಾಹ್ನದ ವೇಳೆಯಲ್ಲಿ ತನ್ನ ತಂದೆ-ತಾಯಿಗೆ ಪೋನ ಮಾಡಿ ಚೆನ್ನಾಗಿಯೇ ಮಾತನಾಡಿದ್ದ ರಿಜಿನಾ ನಂತ್ರ ತನ್ನ ರೂಮ್ನಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಾಗಿಲು ಹಾಕಿಕೊಂಡು ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ನವನಗರ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು, ತನಿಖೆ ವೇಳೆ ರಿಜಿನಾ ಪ್ರಾಥಿಮಾ ಬರೆದಿಟ್ಟ ಡೆತ್ನೋಟ್ವೊಂದು ದೊರೆತಿದ್ದು, ಅದರಲ್ಲಿ ತಂದೆ-ತಾಯಿಗಳಿಗೆ ನಮಸ್ಕಾರ ತಿಳಿಸಿ, 'ನಾನು ನಿಮ್ಮ ಮಗಳಾಗಿ ಇರಲು ಯೋಗ್ಯಳಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ, ನನಗೆ ಬದುಕಲು ತುಂಬಾ ಕಷ್ಟವಾಗುತ್ತಿದೆ, ಜೀವನವನ್ನು ಎದುರಿಸಲು ಧೈರ್ಯವಿಲ್ಲ, ಆದ್ದರಿಂದ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ, ದಯವಿಟ್ಟು ಕ್ಷಮಿಸಿ' ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇತ್ತ ಸ್ಥಳಕ್ಕೆ ಆಕೆಯ ಪಾಲಕರು ಆಗಮಿಸುತ್ತಲೇ ಮಗಳ ಸ್ಥಿತಿಯನ್ನ ಕಂಡು ಗೋಳಿಡುತ್ತಿದ್ದ ದೃಶ್ಯ ಎಂತವರನ್ನು ಮನಕಲುಕುವಂತೆ ಮಾಡಿತ್ತು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಬಾಗಲಕೋಟೆ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.