ನಿಮ್ಮ ಸಚಿವರಿಗೆ ಸೂಕ್ತ ಪದ ಬಳಸಲು ಹೇಳಿ, ಇಲ್ಲದಿದ್ದರೆ ನಾವು ಕಲಿಸ್ತೇವೆ: ಪರಿಕರ್‌ಗೆ ಪ್ರತಾಪ್ ಸಿಂಹ ಟ್ವೀಟ್

Published : Jan 15, 2018, 11:42 AM ISTUpdated : Apr 11, 2018, 12:51 PM IST
ನಿಮ್ಮ ಸಚಿವರಿಗೆ ಸೂಕ್ತ ಪದ ಬಳಸಲು ಹೇಳಿ, ಇಲ್ಲದಿದ್ದರೆ ನಾವು ಕಲಿಸ್ತೇವೆ: ಪರಿಕರ್‌ಗೆ ಪ್ರತಾಪ್ ಸಿಂಹ ಟ್ವೀಟ್

ಸಾರಾಂಶ

ಕನ್ನಡಿಗರು 'ಹರಾಮಿ'ಗಳೆಂದು ಕರೆದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಸೂಕ್ತ ಪದ ಬಳಸಿ ಮಾತನಾಡದಿದ್ದಲ್ಲಿ, ಕರ್ನಾಟಕಕ್ಕೆ ಬರಲಿ, ನಾವು ಕಲಿಸುತ್ತೇವೆ, ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ಕನ್ನಡಿಗರು 'ಹರಾಮಿ'ಗಳೆಂದು ಕರೆದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಸೂಕ್ತ ಪದ ಬಳಸಿ ಮಾತನಾಡದಿದ್ದಲ್ಲಿ, ಕರ್ನಾಟಕಕ್ಕೆ ಬರಲಿ, ನಾವು ಕಲಿಸುತ್ತೇವೆ, ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರ ಕರ್ನಾಟಕದ ಕಂಕುಂಬಿ ಪ್ರದೇಶಲ್ಲಿ ಮಹದಾಯಿ ನೀರು ತಿರುಗಿಸುವ ಸ್ಥಳಕ್ಕೆ ಶನಿವಾರ ಪೊಲೀಸ್ ಭದ್ರತೆಯೊಂದಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪಾಲೇಂಕರ್, 'ಇವರು ಹರಾಮಿಗಳು, ಏನು ಬೇಕಾದರೂ ಮಾಡಬಹುದು,' ಎಂದಿದ್ದರು.

ಗೋವಾ ಸಚಿವರ ಹೇಳಿಕೆಗೆ ರಾಜ್ಯದ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರತಾಪ್ ಸಿಂಹ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಾ ಸಿಎಂ ಮನೋಹರ್ ಪರಿಕರ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ, ಪ್ರತಾಪ್, 'ನಿಮ್ಮ ಸಚಿವರಿಗೆ ಸೂಕ್ತ ಪದಗಳನ್ನು ಬಳಸಿ ಮಾತನಾಡಲು ಸೂಚಿಸಿ,' ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ಸರಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಪ್ರತಾಪ್, 'ಮುಖ್ಯಮಂತ್ರಿಯವರೇ ಏಳಿ, ಎದ್ದೇಳಿ. ಮೇ.1ರವರೆಗೆ ನಿಮ್ಮ ಸ್ಥಾನವನ್ನು ತೊರೆಯುವ ತನಕವಾದರೂ, ನಮ್ಮ ರಾಜ್ಯದ ಮರ್ಯಾದೆ ಉಳಿಸಿ,' ಎಂದಿದ್ದಾರೆ.

'ಗೋವಾ ಜಲಸಂಪನ್ಮೂಲ ಸಚಿವ ತಮ್ಮ ರಾಜ್ಯದ ಎಂಜಿನಿಯರ್‌ಗಳೊಂದಿಗೆ ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಕಾಮಗಾರಿ ಫೋಟೋ ತೆಗೆದುಕೊಳ್ಳುವ ಧೈರ್ಯ ತೋರುತ್ತಾರೆ. ಆದರೆ, ನಮ್ಮ ರಾಜ್ಯದ ಜಲಸಂಪನ್ಮೂಲ ಸಚಿವ ಅದೇ ಧೈರ್ಯದಿಂದ, ಗೋವಾದಲ್ಲಿ ನಡೆಯುತ್ತಿರುವ ಮೆಟ್ಟೂರ್ ಡ್ಯಾಂ ಕಾಮಗಾರಿಯನ್ನು ವೀಕ್ಷಿಸುತ್ತಾರೆಯೇ?' ಎಂದು ಪ್ರಶ್ನಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!