ನಿಮ್ಮ ಸಚಿವರಿಗೆ ಸೂಕ್ತ ಪದ ಬಳಸಲು ಹೇಳಿ, ಇಲ್ಲದಿದ್ದರೆ ನಾವು ಕಲಿಸ್ತೇವೆ: ಪರಿಕರ್‌ಗೆ ಪ್ರತಾಪ್ ಸಿಂಹ ಟ್ವೀಟ್

By Suvarna Web DeskFirst Published Jan 15, 2018, 11:42 AM IST
Highlights

ಕನ್ನಡಿಗರು 'ಹರಾಮಿ'ಗಳೆಂದು ಕರೆದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಸೂಕ್ತ ಪದ ಬಳಸಿ ಮಾತನಾಡದಿದ್ದಲ್ಲಿ, ಕರ್ನಾಟಕಕ್ಕೆ ಬರಲಿ, ನಾವು ಕಲಿಸುತ್ತೇವೆ, ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ಕನ್ನಡಿಗರು 'ಹರಾಮಿ'ಗಳೆಂದು ಕರೆದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಸೂಕ್ತ ಪದ ಬಳಸಿ ಮಾತನಾಡದಿದ್ದಲ್ಲಿ, ಕರ್ನಾಟಕಕ್ಕೆ ಬರಲಿ, ನಾವು ಕಲಿಸುತ್ತೇವೆ, ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರ ಕರ್ನಾಟಕದ ಕಂಕುಂಬಿ ಪ್ರದೇಶಲ್ಲಿ ಮಹದಾಯಿ ನೀರು ತಿರುಗಿಸುವ ಸ್ಥಳಕ್ಕೆ ಶನಿವಾರ ಪೊಲೀಸ್ ಭದ್ರತೆಯೊಂದಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪಾಲೇಂಕರ್, 'ಇವರು ಹರಾಮಿಗಳು, ಏನು ಬೇಕಾದರೂ ಮಾಡಬಹುದು,' ಎಂದಿದ್ದರು.

ji v respect u coz, despite Goa Congress’s dirt politics u showed generosity. Sir, Words r free, but one should be careful while using them, pls advise ur minister Vinod Palienkar to use proper language else if he set foot in our Karnataka again, v wil teach him. pic.twitter.com/rL2oXpV68U

— Pratap Simha (@mepratap)

ಗೋವಾ ಸಚಿವರ ಹೇಳಿಕೆಗೆ ರಾಜ್ಯದ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರತಾಪ್ ಸಿಂಹ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಾ ಸಿಎಂ ಮನೋಹರ್ ಪರಿಕರ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ, ಪ್ರತಾಪ್, 'ನಿಮ್ಮ ಸಚಿವರಿಗೆ ಸೂಕ್ತ ಪದಗಳನ್ನು ಬಳಸಿ ಮಾತನಾಡಲು ಸೂಚಿಸಿ,' ಎಂದು ಆಗ್ರಹಿಸಿದ್ದಾರೆ.

CM Sir, your sleep, Slip n lapse are damaging the interest of our state. Wake up n be vigilant atleast till u demit the office in May 1st week.

— Pratap Simha (@mepratap)

ಕರ್ನಾಟಕ ಸರಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಪ್ರತಾಪ್, 'ಮುಖ್ಯಮಂತ್ರಿಯವರೇ ಏಳಿ, ಎದ್ದೇಳಿ. ಮೇ.1ರವರೆಗೆ ನಿಮ್ಮ ಸ್ಥಾನವನ್ನು ತೊರೆಯುವ ತನಕವಾದರೂ, ನಮ್ಮ ರಾಜ್ಯದ ಮರ್ಯಾದೆ ಉಳಿಸಿ,' ಎಂದಿದ್ದಾರೆ.

Or Would Karnataka Water Resources Minister ever DARE to visit n inspect Mettur Dam with his Chief Engineer?! What a timid govt that allows Goan minister to visit our sensitive site n take pictures n damage our case!

— Pratap Simha (@mepratap)

'ಗೋವಾ ಜಲಸಂಪನ್ಮೂಲ ಸಚಿವ ತಮ್ಮ ರಾಜ್ಯದ ಎಂಜಿನಿಯರ್‌ಗಳೊಂದಿಗೆ ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಕಾಮಗಾರಿ ಫೋಟೋ ತೆಗೆದುಕೊಳ್ಳುವ ಧೈರ್ಯ ತೋರುತ್ತಾರೆ. ಆದರೆ, ನಮ್ಮ ರಾಜ್ಯದ ಜಲಸಂಪನ್ಮೂಲ ಸಚಿವ ಅದೇ ಧೈರ್ಯದಿಂದ, ಗೋವಾದಲ್ಲಿ ನಡೆಯುತ್ತಿರುವ ಮೆಟ್ಟೂರ್ ಡ್ಯಾಂ ಕಾಮಗಾರಿಯನ್ನು ವೀಕ್ಷಿಸುತ್ತಾರೆಯೇ?' ಎಂದು ಪ್ರಶ್ನಿಸಿದ್ದಾರೆ.
 

click me!