
ಮೈಸೂರು(ಜ.19): ತಾಯಿಯೊಬ್ಬಳು ತನ್ನ ಮಗುವನ್ನು ಬೆಂಕಿಗೆ ಎಸೆದ ಅಮಾನುಷ ಕೃತ್ಯ ಮೈಸೂರಿನ ಹೆಚ್'ಡಿ ಕೋಟೆ ತಾಲೂಕಿನ ಚಿಕ್ಕೇರಿಹಾಡಿಯಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಎರಡು ವರ್ಷದ ಹೆತ್ತ ಮಗುವನ್ನೇ ಈ ತಾಯಿ ಬೆಂಕಿಗೆ ಎಸೆದಿದ್ದಾಳೆ. ತನ್ನ ಗಂಡನನ್ನು ಬಿಟ್ಟು ಒಂಟಿಯಾಗಿದ್ದ ಮಗುವಿನ ತಾಯಿ ದಿನವಿಡೀ ಕುಡಿದ ನಶೆಯಲ್ಲಿರುತ್ತಿದ್ದಳು. ಈ ಸಂದರ್ಭದಲ್ಲಿ ತನ್ನ ಮಗುವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಳು. ನಿನ್ನೆ ರಾತ್ರಿ ಚಳಿ ಹೆಚ್ಚಾಗಿದ್ದರಿಂದ ಚಳಿ ಕಾಯಿಸಿಕೊಳ್ಳಲು ಬೆಂಕಿ ಹಚ್ಚಿದ್ದಳು. ಈ ವೇಳೆ ಕೈಯ್ಯಲ್ಲಿದ್ದ ಮಗುವನ್ನು ಬೆಂಕಿಗೆಸೆದಿದ್ದು, ಮಗುವಿನ ಮುಖ ಹಾಗೂ ದೇಹದಲ್ಲೆಡೆ ಸುಟ್ಟ ಗಾಯಗಳಾಗಿವೆ.
ಘಟನೆ ಸಂಭವಿಸಿ 5 ತಾಸಾದರೂ ಮಗುವಿಗೆ ಚಿಕಿತ್ಸೆ ನೀಡಿರದ ಕಾರಣ ಸ್ಥಳಕ್ಕಾಗಮಿಸಿದ ಅಂಗನವಾಡಿ ಕಾರ್ಯಕರ್ತರು ಆಕೆಗೆ ಹಣ ನೀಡಿ ಮನವೊಲಿಸಿ ಮಗುವನ್ನು ರಕ್ಷಿಸಿದ್ದಲ್ಲದೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.