ಅಪಘಾತದಲ್ಲಿ ಪೆಟ್ಟಾದ ತಾಯಿಯ ಆಸ್ಪತ್ರೆಗೆ ಸೇರಿಸಲು ಪುತ್ರನ ಪರದಾಟ

Published : Jun 23, 2017, 12:28 PM ISTUpdated : Apr 11, 2018, 01:07 PM IST
ಅಪಘಾತದಲ್ಲಿ ಪೆಟ್ಟಾದ ತಾಯಿಯ ಆಸ್ಪತ್ರೆಗೆ ಸೇರಿಸಲು ಪುತ್ರನ ಪರದಾಟ

ಸಾರಾಂಶ

ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ ವೃದ್ಧ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಯಾರ ನೆರವೂ ಸಿಗದೆ ಆಕೆಯ ಪುತ್ರ ಸುಮಾರು 45 ನಿಮಿಷ ಪರದಾಡಿದ ಘಟನೆ ನಗರದ ರಿಂಗ್‌ ರಸ್ತೆಯ ಉದನೂರು ಕ್ರಾಸ್‌ ಬಳಿ ಗುರುವಾರ ನಡೆದಿದೆ.

ಕಲಬುರಗಿ: ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ ವೃದ್ಧ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಯಾರ ನೆರವೂ ಸಿಗದೆ ಆಕೆಯ ಪುತ್ರ ಸುಮಾರು 45 ನಿಮಿಷ ಪರದಾಡಿದ ಘಟನೆ ನಗರದ ರಿಂಗ್‌ ರಸ್ತೆಯ ಉದನೂರು ಕ್ರಾಸ್‌ ಬಳಿ ಗುರುವಾರ ನಡೆದಿದೆ.

ವೃದ್ಧೆ ಸಿದ್ದಮ್ಮ ಮಂದೇವಾಲ್‌(85) ರಕ್ತ ಸ್ರಾವದಿಂದ ಹಿಂಸೆ ಅನುಭವಿಸಿದ ಗಾಯಾಳು. ಬಳಿಕ ಪೊಲೀಸರೇ ಎಸ್ಕಾರ್ಟ್‌ ವಾಹನದಲ್ಲಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ವೃದ್ಧೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಇನ್ನೂ ರಕ್ತಸ್ರಾವ ನಿಂತಿಲ್ಲ. ಅವರ ದೇಹಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ರಿಂಗ್‌ ರಸ್ತೆಯಲ್ಲೇ ವೃದ್ಧೆ ಸಿದ್ದಮ್ಮ ಅವರ ಮಕ್ಕಳ ಹೋಟೆಲ್‌ ಇದ್ದು, ಅವರನ್ನು ನೋಡಲೆಂದು ಸಿದ್ದಮ್ಮ ಬಂದಿದ್ದರು. ಈ ವೇಳೆ ರಸ್ತೆ ದಾಟುವಾಗ ವೇಗವಾಗಿ ಬಂದ ಬೈಕ್‌ ಸವಾರ ವೃದ್ಧೆಗೆ ಡಿಕ್ಕಿ ಹೊಡೆದಿದ್ದು, ಸುಮಾರು ಮೂರ್ನಾಲ್ಕು ಮೀಟರ್‌ವರೆಗೆ ಬೈಕ್‌ ಅವರನ್ನು ಎಳೆದೊಯ್ದು ನೆಲಕ್ಕೆ ಅಪ್ಪಳಿಸಿದೆ. ಘಟನೆಯಲ್ಲಿ ವೃದ್ಧೆ ಯ ತಲೆಗೆ ತೀವ್ರ ಪೆಟ್ಟಾಗಿದ್ದು, ಪ್ರಜ್ಞೆ ತಪ್ಪಿದಾಗ ಈ ಘಟನೆ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲೆ ಕೇಸಲ್ಲಿ ಶಾಸಕ ಬೈರತಿ ಬಸವರಾಜು ಬಂಧನ ಸನ್ನಿಹಿತ: ನಿರೀಕ್ಷಣಾ ಜಾಮೀನು ಅರ್ಜಿ ವಜಾ
ದ್ವೇಷ ಭಾಷಣ ತಡೆ ಕಾಯ್ದೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಲ್ಲ: ಬಿ.ಕೆ.ಹರಿಪ್ರಸಾದ್‌ ಲೇಖನ