ಕುಟುಂಬ ಒಂದು ಸಂಬಂಧಿಕರ ಮನೆಗೆ ಹೋಗಿ ಗಣೇಶ ಹಬ್ಬವನ್ನ ವಿಜೃಂಬಣೆಯಿಂದ ಆಚರಿಸಿ ಖುಷಿ ಖುಷಿಯಾಗಿದ್ದರು. ಆದರೆ, ವಿಧಿ ಆ ಕುಟುಂಬದ ಖುಷಿಯನ್ನು ಕಸಿದುಕೊಂಡಿದೆ..
ಬೆಂಗಳೂರು, (ಸೆ.14): ನಿನ್ನೆ (ಗುರುವಾರ) ನಾಡಿನಾದ್ಯಂತ ಗಣೇಶ ಹಬ್ಬದ ಸಡಗರ, ಸಂಭ್ರಮ ಕಳೆಗಟ್ಟಿತ್ತು. ಅದರಂತೆ ಬೆಂಗಳೂರಿನ ಕುಟುಂಬವೊಂದು ಸಂಬಂಧಿಕರ ಮನೆಗೆ ಹೋಗಿ ಗಣೇಶ ಹಬ್ಬವನ್ನ ವಿಜೃಂಬಣೆಯಿಂದ ಆಚರಿಸಿ ಖುಷಿ ಖುಷಿಯಾಗಿದ್ದರು. ಆದರೆ, ಆ ಖುಷಿ ಬಹಳ ಹೊತ್ತು ಇರಲಿಲ್ಲ.
ರಘು, ಸುರೇಖಾ ಹಾಗೂ ಮಗಳು ಅರಾಧ್ಯ ಈ ಮೂವರು ಗಣೇಶ ಹಬ್ಬಕ್ಕೆಂದು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿ, ಪುನಃ ರಾತ್ರಿ ತಮ್ಮ ಮನೆಗೆ ಸ್ಕೂಟರ್ನಲ್ಲಿ ಹಿಂದಿರುಗುವಾಗ ಹೆಬ್ಬಾಳ ಬಳಿಯ ಲುಂಬಿಣಿ ಗಾರ್ಡನ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ.
ಈ ದುರ್ಘಟನೆಯಲ್ಲಿ ತಾಯಿ ಸುರೇಖಾ ಹಾಗೂ ಮಗಳು ಅರಾಧ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ರಘು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.