ಹಬ್ಬಕ್ಕೆಂದು ಹೋಗಿ ಹೆಣವಾಗಿ ಹಿಂದಿರುಗಿದ ತಾಯಿ-ಮಗಳು

By Web DeskFirst Published Sep 14, 2018, 1:49 PM IST
Highlights

ಕುಟುಂಬ ಒಂದು ಸಂಬಂಧಿಕರ ಮನೆಗೆ ಹೋಗಿ ಗಣೇಶ ಹಬ್ಬವನ್ನ ವಿಜೃಂಬಣೆಯಿಂದ ಆಚರಿಸಿ ಖುಷಿ ಖುಷಿಯಾಗಿದ್ದರು. ಆದರೆ, ವಿಧಿ  ಆ ಕುಟುಂಬದ ಖುಷಿಯನ್ನು ಕಸಿದುಕೊಂಡಿದೆ.. 

ಬೆಂಗಳೂರು, (ಸೆ.14): ನಿನ್ನೆ (ಗುರುವಾರ) ನಾಡಿನಾದ್ಯಂತ ಗಣೇಶ ಹಬ್ಬದ ಸಡಗರ, ಸಂಭ್ರಮ ಕಳೆಗಟ್ಟಿತ್ತು. ಅದರಂತೆ ಬೆಂಗಳೂರಿನ ಕುಟುಂಬವೊಂದು ಸಂಬಂಧಿಕರ ಮನೆಗೆ ಹೋಗಿ ಗಣೇಶ ಹಬ್ಬವನ್ನ ವಿಜೃಂಬಣೆಯಿಂದ ಆಚರಿಸಿ ಖುಷಿ ಖುಷಿಯಾಗಿದ್ದರು. ಆದರೆ, ಆ ಖುಷಿ ಬಹಳ ಹೊತ್ತು ಇರಲಿಲ್ಲ. 

ರಘು, ಸುರೇಖಾ ಹಾಗೂ ಮಗಳು ಅರಾಧ್ಯ ಈ ಮೂವರು ಗಣೇಶ ಹಬ್ಬಕ್ಕೆಂದು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿ, ಪುನಃ ರಾತ್ರಿ ತಮ್ಮ ಮನೆಗೆ ಸ್ಕೂಟರ್‌ನಲ್ಲಿ ಹಿಂದಿರುಗುವಾಗ ಹೆಬ್ಬಾಳ ಬಳಿಯ ಲುಂಬಿಣಿ ಗಾರ್ಡನ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. 

ಈ ದುರ್ಘಟನೆಯಲ್ಲಿ ತಾಯಿ ಸುರೇಖಾ ಹಾಗೂ ಮಗಳು ಅರಾಧ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ರಘು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!