ಹೈದರಾಬಾದ್’ಗೆ ತಲುಪಿದ ಶ್ರೀನಿವಾಸ್ ಮೃತದೇಹ

Published : Feb 28, 2017, 07:50 AM ISTUpdated : Apr 11, 2018, 01:07 PM IST
ಹೈದರಾಬಾದ್’ಗೆ ತಲುಪಿದ ಶ್ರೀನಿವಾಸ್ ಮೃತದೇಹ

ಸಾರಾಂಶ

ಶ್ರೀನಿವಾಸ್ ಅಮೆರಿಕಾದ ಒಲ್ತೆ'ದ ಪಟ್ಟಣದಲ್ಲಿನ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬುಧವಾರ ಸ್ನೇಹಿತರೊಂದಿಗೆ ಕ್ಯಾನ್ವಾಸ್ ಬಾರ್'ನ ನೈಟ್ ಕ್ಲಬ್'ಗೆ ಹೋಗಿದ್ದಾಗ ಹತ್ಯೆ ಸಂಭವಿಸಿದೆ.

ಹೈದರಾಬಾದ್ (ಫೆ.28): ಅಮೆರಿಕಾದಲ್ಲಿ ಜನಾಂಗೀಯ ದ್ವೇಷಕ್ಕೆ ಬಲಿಯಾದ ಇಂಜಿನಿಯರ್ ಶ್ರಿನಿವಾಸ್ ಮೃತದೇಹ ಕಳೆದ ರಾತ್ರಿ ಹೈದರಾಬಾದ್ ಬಳಿಯಿರುವ ಸ್ವಗ್ರಾಮಕ್ಕೆ ತಲುಪಿದೆ.

ಕಳೆದ ಬುಧವಾರ ರಾತ್ರಿ 51 ವರ್ಷದ ಆ್ಯಡಂ ಪುರಿನ್'ಟನ್ ಎಂಬ  ಅಮೆರಿಕಾದ ಮಾಜಿ ನೌಕಾಧಿಕಾರಿ ಕ್ಷುಲ್ಲಕ ವಿಚಾರದಲ್ಲಿ ಶ್ರೀನಿವಾಸ ಹಾಗೂ ಆತನ ಗೆಳೆಯ ಅಲೋಕ್ ಮಡಾಸನಿ ಅವರನ್ನು ನಿಂದಿಸಿ ಜಗಳಕ್ಕಿಳಿದಿದ್ದಾನೆ. ಬಳಿಕ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ ಶ್ರಿನಿವಾಸ ಮೃತಪಟ್ಟರೆ ಅಲೋಕ್’’ಗೆ ಗಂಭೀರವಾಗಿ ಗಾಯಗಳಾಗಿವೆ.

ಆ್ಯಡಂ ಪುರಿನ್'ಟನ್ ಗುಂಡಿಟ್ಟು ಕೊಲ್ಲುವ ಮುನ್ನ 'ನಮ್ಮ ದೇಶ ಬಿಟ್ಟು ತೊಲಗಿ' ಎಂದು ಅಬ್ಬರಿಸಿದ್ದಾನೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ಜನಾಂಗೀಯ ದ್ವೇಷಕ್ಕೆ ಭಾರತೀಯನೊಬ್ಬ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ.

ಹೈದರಾಬಾದ್ನ ಜವಹರ್ ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪಡೆದಿರುವ  ಶ್ರೀನಿವಾಸ್ ಕುಚಿಬೋತ್ಲಾ ನಂತರ ಅಮೆರಿಕಾದ ಟಾಕ್ಸಸ್ ವಿವಿಯಿಂದ ಸ್ವಾತಕೋತ್ತರ ಪದವಿ ಪಡೆದಿದ್ದರು. ನಂತರ ಯುಎಸ್'ನ ಒಲ್ತೆ'ದ ಪಟ್ಟಣದಲ್ಲಿನ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬುಧವಾರ ಸ್ನೇಹಿತರೊಂದಿಗೆ ಕ್ಯಾನ್ವಾಸ್ ಬಾರ್'ನ ನೈಟ್ ಕ್ಲಬ್'ಗೆ ಹೋಗಿದ್ದಾಗ ಹತ್ಯೆ ಸಂಭವಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?