ಗೋರಕ್ಷಣೆಯೊಂದಿಗೆ ಹಿಂಸೆಯ ಸಮೀಕರಣ ಖಂಡನೀಯ: ಮೋಹನ್ ಭಾಗವತ್

Published : Sep 30, 2017, 04:01 PM ISTUpdated : Apr 11, 2018, 12:55 PM IST
ಗೋರಕ್ಷಣೆಯೊಂದಿಗೆ ಹಿಂಸೆಯ ಸಮೀಕರಣ ಖಂಡನೀಯ: ಮೋಹನ್ ಭಾಗವತ್

ಸಾರಾಂಶ

ಗೊರಕ್ಷಣೆಯೊಂದಿಗೆ ಹಿಂಸೆಯನ್ನು ಥಳಕು ಹಾಕುವುದನ್ನು ಖಂಡಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್,  ಗೋರಕ್ಷಣೆಯು ಧರ್ಮಾತೀತವಾದ ವಿಷಯವಾಗಿದೆ ಎಂದು ಹೇಳಿದ್ದಾರೆ. ನಾಗಪುರದಲ್ಲಿರುವ ಆರೆಸ್ಸೆಸ್  ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್, ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸುವುದು ಸ್ವೀಕಾರಾರ್ಹವಲ್ಲವೆಂದು ಹೇಳಿದ್ದಾರೆ.

ನಾಗಪುರ: ಗೊರಕ್ಷಣೆಯೊಂದಿಗೆ ಹಿಂಸೆಯನ್ನು ಥಳಕು ಹಾಕುವುದನ್ನು ಖಂಡಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್,  ಗೋರಕ್ಷಣೆಯು ಧರ್ಮಾತೀತವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.

ನಾಗಪುರದಲ್ಲಿರುವ ಆರೆಸ್ಸೆಸ್  ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್, ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸುವುದು ಸ್ವೀಕಾರಾರ್ಹವಲ್ಲವೆಂದು ಹೇಳಿದ್ದಾರೆ.

ಭಾರತದಲ್ಲಿ ಹಾಲಿಗಿಂತ ಹೆಚ್ಚಾಗಿ ಗೋಮೂತ್ರ ಹಾಗೂ ಗೊಬ್ಬರಕ್ಕಾಗಿ  ಹಸುಗಳು ಬಳಸಲ್ಪತ್ತದೆ.  ರೈತರು ಕೃಷಿಯಲ್ಲಿ ಪ್ರಗತಿ ಹೊಂದಬೇಕಾದರೆ ಗೋಸಾಕಣಿಕೆ ಮಾಡಲೇಬೇಕು ಎಂದು ಅವರು ಹೇಳಿದ್ದಾರೆ.

ಗೋಸಾಕಣಿಕೆಯು  ಧಾರ್ಮಿಕ ವಿಚಾರವಲ್ಲ. ಗೋಸಾಕಣಿಕೆಯಲ್ಲಿ ತೊಡಗಿರುವ ಎಷ್ಟೋ ಮುಸ್ಲಿಮರನ್ನು ನಾನು ಬಲ್ಲೆ, ಬಹಳ ಮುಸ್ಲಿಮರು ಗೋರಕ್ಷಣೆಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ, ಎಂದು ಅವರು ಹೇಳಿದ್ದಾರೆ.

ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ಸಲ್ಲದು, ಅದೇ ರೀತಿ ಗೋಕಳ್ಳರಿಂದ ಬಹಳಷ್ಟು ಮಂದಿಯ ಹತ್ಯೆಯಾಗಿದೆ.  ಗೋರಕ್ಷಣೆಯನ್ನು ಧರ್ಮಾತೀತವಾಗಿ ನೋಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ