ಭಾರತ್ ಬಂದ್ ಕರೆ ಹಿನ್ನೆಲೆ: ಮೋದಿ ಬೆಂಬಲಿಗರಿಂದ ‘ಸಂಭ್ರಮ ದಿವಸ್’ ಆಚರಣೆ

Published : Nov 28, 2016, 02:47 AM ISTUpdated : Apr 11, 2018, 01:08 PM IST
ಭಾರತ್ ಬಂದ್ ಕರೆ ಹಿನ್ನೆಲೆ: ಮೋದಿ ಬೆಂಬಲಿಗರಿಂದ ‘ಸಂಭ್ರಮ ದಿವಸ್’ ಆಚರಣೆ

ಸಾರಾಂಶ

500 ಹಾಗೂ 1000 ಮುಖಬೆಲೆಯ ನೋಟು ಬಂದ್ ಅವ್ಯವಸ್ಥೆ ವಿರೋಧಿಸಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಾರ್ಟಿ ಹಾಗೂ ಎಡಪಕ್ಷಗಳು ಆಕ್ರೊಶ್ ದಿವಸ್ ಭಾರತ್​​ ಬಂದ್​ಗೆ ಕರೆ ನೀಡಿವೆ. ಆದ್ರೆ, ಮೋದಿ ಬೆಂಬಲಿಗರು ಸೆಡ್ಡು ಹೊಡೆದಿದ್ದು ಸಂಭ್ರಮ ದಿವಸ್ ಅಂತ ಆಚರಣೆಗೆ ಮುಂದಾಗಿವೆ.

ಬೆಂಗಳೂರು(ನ.28): 500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ದಿವಸ್‍ಗೆ ಕರೆ ನೀಡಿವೆ. ಆಕ್ರೋಶ್ ದಿವಸ್ ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಕೂಡ ಪರೋಕ್ಷ ಬೆಂಬಲ ನೀಡುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆಯಿದೆ. ಆದರೆ, ಆಸ್ಪತ್ರೆ, ಮೆಡಿಕಲ್ ಶಾಪ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ ನಾಳೆ ಏನಿರುತ್ತೆ? ಏನಿರಲ್ಲ ಎನ್ನುವುದರ ಸಂಪೂರ್ಣ ವಿವರ.

 

500 ಹಾಗೂ 1000 ಮುಖಬೆಲೆಯ ನೋಟು ಬಂದ್ ಅವ್ಯವಸ್ಥೆ ವಿರೋಧಿಸಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಾರ್ಟಿ ಹಾಗೂ ಎಡಪಕ್ಷಗಳು ಆಕ್ರೊಶ್ ದಿವಸ್ ಭಾರತ್​​ ಬಂದ್​ಗೆ ಕರೆ ನೀಡಿವೆ. ಆದ್ರೆ, ಮೋದಿ ಬೆಂಬಲಿಗರು ಸೆಡ್ಡು ಹೊಡೆದಿದ್ದು ಸಂಭ್ರಮ ದಿವಸ್ ಅಂತ ಆಚರಣೆಗೆ ಮುಂದಾಗಿವೆ. ಹಾಗಿದ್ದರೆ ಆಕ್ರೋಶ್ ದಿವಸ್'​ಗೆ ಯಾರ್ಯಾರು​ ಬೆಂಬಲ ಕೊಡ್ತಾರೆ?

- ಹಾಲು, ಪೇಪರ್​, ಆಸ್ಪತ್ರೆ, ಔಷಧಿ

- ರೈಲು ಸೇವೆ, ಮೆಟ್ರೋ ಸೇವೆ ಲಭ್ಯ

- ಬಿಎಂಟಿಸಿ ,ಕೆಎಸ್​ಆರ್​ಟಿಸಿ ಬಸ್​

- ಬೆಸ್ಕಾಂ, ಬಿಡಬ್ಲ್ಯೂಎಸ್​ಎಸ್​ಬಿ ಸೇವೆ

- ಎಂದಿನಂತೆ ಮಾರುಕಟ್ಟೆ ವಹಿವಾಟು

- ಶೂಟಿಂಗ್ ಇರುತ್ತೆ, ಥಿಯೇಟರ್ ಓಪನ್

- ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯ

- ಹೋಟೆಲ್​, ಬ್ಯಾಂಕ್​, ಅಂಚೆ ಕಚೇರಿ

- ಅಂಗಡಿ-ಮುಂಗಟ್ಟು ವಹಿವಾಟು ಸಲೀಸು

- ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ  

- ಸರ್ಕಾರಿ ಕಚೇರಿ ಸೇವೆ ವ್ಯತ್ಯಯ ಇಲ್ಲ

ಇನ್ನು ಆಟೋ, ಕ್ಯಾಬ್​ಗಳು ಕೂಡ ಬಂದ್​ಗೆ ಬೆಂಬಲ ವ್ಯಕ್ತಪಡಿಸುತ್ತಿಲ್ಲ. ಎಂದಿನಂತೆ ಆಟೋ, ಕ್ಯಾಬ್'​ಗಳು ಓಡಾಡಲಿದ್ದು, ಮೋದಿ ನಿರ್ಧಾರಕ್ಕೆ ಬೆಂಬಲ ವ್ಯಕ್ತಡಿಸಿದ್ದಾರೆ.

ಇನ್ನೂ ಮಂಡ್ಯ, ಚಿತ್ರದುರ್ಗ , ಬಾಗಲಕೋಟೆ, ಯಾದಗಿರಿ,ದಾವಣಗೆರೆ, ರಾಯಚೂರು, ಕೊಡಗು, ಬೀದರ್, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಂದಿನಂತೆ ಶಾಲಾ-ಕಾಲೇಜುಗಳು ನಡೆಯಲಿವೆ. ಒಟ್ಟಿನಲ್ಲಿ ಆಕ್ರೋಶ್ ದಿವಸ್​ಗೆ ರಾಜ್ಯ ಸರ್ಕಾರವೇನೋ ಸಿದ್ಧತೆ ನಡೆಸ್ತಿದೆ. ಆದ್ರೆ, ಉಳಿದೆಲ್ಲಾ ಸಂಘಟನೆಗಳು ಮೋದಿ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಬಂದ್​ ಯಶಸ್ವಿಯಾಗುತ್ತಾ ಅನ್ನೊದನ್ನ ಕಾದು ನೋಡ್ಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!