
ಕೋಲಾರ[ಜೂ.04]: ಸಂಸದ ಕೆ.ಎಚ್ ಮುನಿಯಪ್ಪ ಪುತ್ರಿ ಕೆ.ಜಿ.ಎಫ್ ಶಾಸಕಿ ರೂಪಕಲಾ ವಿರುದ್ಧ ಕ್ಷೇತ್ರದ ಮಹಿಳೆಯರು ತಿರುಗಿಬಿದ್ದಿದ್ದು, ಮಾತು ತಪ್ಪಿದ ಶಾಸಕಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ ಡಿಸಿಸಿ ಬ್ಯಾಂಕ್ ನಿರ್ದೇಶಕಿಯಾಗಿದ್ದ ರೂಪಕಲಾ, ಕ್ಷೇತ್ರದ ಮಹಿಳೆಯರಿಗೆ ಸಾಲ ಕೊಡಿಸಿದ್ದರು. 2018ರ ಚುನಾವಣೆಗೂ ಮುನ್ನ ಸಾಲ ಕೊಡಿಸಿದ್ದ ಅವರು, ತಾವು ಶಾಸಕಿಯಾದ ಬಳಿಕ ಸಾಲವನ್ನು ಮರುಪಾವತಿ ಮಾಡುವ ಅಗತ್ಯವಿಲ್ಲ. ನಾನು ಸಾಲವನ್ನು ಮನ್ನ ಮಾಡುತ್ತೇನೆಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು. ಶಾಸಕಿಯ ಮಾತು ನಂಬಿ ಕ್ಷೇತ್ರದ ಸಾಕಷ್ಟು ಮಹಿಳೆಯರು ಲಕ್ಷಾಂತರ ರುಪಾಯಿ ಡಿಸಿಸಿ ಬ್ಯಾಂಕ್’ನಿಂದ ಸಾಲ ಮಾಡಿದ್ದರು.
ಇದೀಗ ರೂಪಕಲಾ ಚುನಾವಣೆಯಲ್ಲಿ ಗೆದ್ದ ನಂತರ ಬ್ಯಾಂಕ್’ನ ಸಿಬ್ಬಂದಿ ಸಾಲ ಪಡೆದ ಹಣವನ್ನು ಕಟ್ಟುವಂತೆ ಮಹಿಳೆಯರ ಮನೆಬಾಗಿಲಿಗೆ ಬಂದು ಹಿಂಸೆ ನೀಡುತ್ತಿದ್ದಾರೆಂದು ಮಹಿಳೆಯರು ಆರೋಪಿಸಿದ್ದು, ಮಾತು ತಪ್ಪಿದ ಶಾಸಕಿ ವಿರುದ್ಧ ಕ್ಷೇತ್ರದ ಮಹಿಳೆಯರು ತಿರುಗಿಬಿದ್ದಿದ್ದಾರೆ. ನಮ್ಮಲ್ಲಿ ಸಾಲ ಕಟ್ಟಲು ಹಣವಿಲ್ಲ, ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದು ನೊಂದ ಮಹಿಳೆಯರು ತಮ್ಮ ಗೋಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.