ವಿದ್ವತ್ ಡಿಸ್ಚಾರ್ಜ್ ಮಾಡಲು ವೈದ್ಯರ ಮೇಲೆ ಹ್ಯಾರೀಸ್ ಒತ್ತಡ?

By Suvarna Web DeskFirst Published Mar 1, 2018, 12:00 PM IST
Highlights

ವಿದ್ವತ್ ಡಿಸ್ಚಾರ್ಜ್ ವಿಚಾರವಾಗಿ  ಮಲ್ಯ ಆಸ್ಪತ್ರೆಯ ವೈದ್ಯರು ಮತ್ತು ವಿದ್ವತ್ ತಂದೆ ಲೋಕನಾಥ್ ನಡುವೆ ವಾಗ್ವಾದ ನಡೆದಿದೆ. 

ಬೆಂಗಳೂರು (ಮಾ. 01): ವಿದ್ವತ್ ಡಿಸ್ಚಾರ್ಜ್ ವಿಚಾರವಾಗಿ  ಮಲ್ಯ ಆಸ್ಪತ್ರೆಯ ವೈದ್ಯರು ಮತ್ತು ವಿದ್ವತ್ ತಂದೆ ಲೋಕನಾಥ್ ನಡುವೆ ವಾಗ್ವಾದ ನಡೆದಿದೆ. 

ನಿಮ್ಮ ಮಗ ವಿದ್ವತ್ ಗುಣಮುಖರಾಗಿದ್ದಾರೆ  ಡಿಸ್ಟಾರ್ಜ್ ಮಾಡಿಕೊಳ್ಳಿ ಎಂದು ವಿದ್ವತ್ ತಂದೆ ಲೋಕನಾಥ್’ಗೆ  ಮಲ್ಯ ಆಸ್ಪತ್ರೆಯ ವೈದ್ಯರು ಒತ್ತಡ ಹಾಕಿದ್ದಾರೆ.  ಆದರೆ ನಮ್ಮ ಮಗ ಇನ್ನು ಗುಣಮುಖವಾಗಿಲ್ಲವೆಂದು ಡಿಸ್ಟಾರ್ಜ್ ಮಾಡಿಕೊಳ್ಳಲು ಲೋಕನಾಥ್ ಹಿಂದೇಟು ಹಾಕಿದ್ದಾರೆ. 

ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ್ರೆ ನಲಪಾಡ್’ಗೆ ಜಾಮೀನು ಸಿಗುತ್ತೆ ಅನ್ನೋದು ಎಂಎಲ್ಎ ಹ್ಯಾರಿಸ್ ಲೆಕ್ಕಚಾರ. ಹೀಗಾಗಿ  ವಿದ್ವತ್ ಡಿಸ್ಟಾರ್ಜ್ ಮಾಡುವಂತೆ  ಮಲ್ಯ ಆಸ್ಪತ್ರೆಯ ವೈದ್ಯರಿಗೆ ಶಾಸಕ ಹ್ಯಾರೀಸ್ ಒತ್ತಡ ಹಾಕಿದ್ದಾರೆನ್ನಲಾಗಿದೆ.  ಹ್ಯಾರೀಸ್ ಒತ್ತಡಕ್ಕೆ  ಮಣಿದು ವಿದ್ವತ್ ಡಿಸ್ಟಾರ್ಜ್ ಮಾಡಿಕೊಳ್ಳುವಂತೆ ಲೋಕನಾಥ್ ಗೆ ಒತ್ತಡ ಹಾಕ್ತಿದ್ದರಾ ಮಲ್ಯ ಆಸ್ಪತ್ರೆಯ ವೈದ್ಯರು?  ಎಂಬ ಪ್ರಶ್ನೆ ಎದ್ದಿದೆ. 
 

click me!