
ಮೈಸೂರು (ಮಾ. 01): ದಲಿತ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಯುವತಿಗೆ ವಿಷ ಹಾಕಿ ಪೋಷಕರು ಮರ್ಯಾದ ಹತ್ಯೆಗೈದಿದ್ದಾರೆ. ಹತ್ಯೆ ಗುರುತು ಸಿಗದೇ ಮಗಳನ್ನು ಜಮೀನಿನಲ್ಲೇ ಪೋಷಕರು ಸುಟ್ಟು ಹಾಕಿದ್ದಾರೆ.
ಆಲನಹಳ್ಳಿ ಗ್ರಾಮದ ದಲಿತ ಯುವಕ ಜೊತೆ ಈ ಯುವತಿಗೆ ಪ್ರೇಮಾಂಕುರವಾಗಿತ್ತು. ಕೆಲ ದಿನಗಳ ಹಿಂದಷ್ಟೇ ಉಮೇಶ್, ಸುಮಾ ಜೋಡಿ ಮನೆ ಬಿಟ್ಟು ಓಡಿ ಹೋಗಿದ್ದರು. ರಾಜಿ ಸಂಧಾನದ ಮೂಲಕ ಜೋಡಿಯನ್ನ ಕುಟುಂಬಸ್ಥರು ಬೇರ್ಪಡಿಸಿದ್ದರು. ಒಂದು ವರ್ಷದಿಂದ ಯುವತಿ ಸಂಬಂಧಿಕರ ಮನೆಯಲ್ಲಿದ್ದಳು. ಆತ ದಲಿತ ಯುವಕ ಎಂಬ ಕಾರಣಕ್ಕೆ ಪೋಷಕರೇ ಮಗಳಿಗೆ ವಿಷ ಉಣಿಸಿ, ಬಳಿಕ ನೇಣಿಗೆ ಹಾಕಿ ಕ್ರೂರವಾಗಿ ಕೊಂದಿದ್ದಾರೆ.
ಎಚ್. ಡಿ. ಕೋಟೆ ಪೊಲೀಸರು ಯುವತಿಯ ತಂದೆಯನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.