
ಗಂಗಾವತಿ(ಜು.28): ಶಾಸಕ ಶಿವರಾಜ್ ತಂಗಡಿ ಸಹೋದರ ನಾಗರಾಜ್ ತಂಗಡಗಿ ಕಾಣೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿ ಪಟ್ಟಣದಿಂದ ಜುಲೈ 24 ರಂದು ಕಾಣೆಯಾಗಿದ್ದಾರೆ. . ಜುಲೈ 24 ರಂದು ನಾಗರಾಜ್ ತಂಗಡಗಿ ಕ್ಷೌರ ಮಾಡಿಸಿಕೊಂಡು ಬರೋದಾಗಿ ಹೇಳಿ ಹೋಗಿದ್ರು. ಆದ್ರೆ ಇದುವರೆಗೂ ಮನೆಗೆ ಬಂದಿಲ್ಲ. ಈ ಬಗ್ಗೆ ತಂಗಡಗಿಯ ಮತ್ತೋರ್ವ ಸಹೋದರ ರವಿ ಪಾಟೀಲ್ ಕಾರಟಗಿ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಗರಾಜ ತಂಗಡಗಿ ನಾಪತ್ತೆ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗಿವೆ. ರವಿ ತಂಗಡಗಿ ದೂರಿನನ್ವಯ ಕಾರಟಗಿ ಠಾಣೆ ಪೋಲೀಸರು ನಾಗರಾಜ್ ತಂಗಡಿಗಾಗಿ ಹುಡುಕಾಟ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.