ಒಂದೇ ರಾತ್ರಿಯಲ್ಲಿ ಮಾಯವಾದ ಮಳೆ : ಭಾರತಿ ತೀರ್ಥ ಶ್ರೀಗಳ ಯಾಗದ ಫಲವೇ !

Published : Jun 16, 2018, 07:42 PM IST
ಒಂದೇ ರಾತ್ರಿಯಲ್ಲಿ ಮಾಯವಾದ ಮಳೆ : ಭಾರತಿ ತೀರ್ಥ ಶ್ರೀಗಳ ಯಾಗದ ಫಲವೇ !

ಸಾರಾಂಶ

ಒಂದೇ ರಾತ್ರಿಯಲ್ಲಿ ತಣ್ಣಗಾದ ಮಳೆ ಶ್ರೀಗಳ ಪವಾಡ ಎಂದ ಜನತೆ

ಶೃಂಗೇರಿ[ಜೂ.16]: ಶೃಂಗೇರಿಯಲ್ಲಿ ಒಂದೇ ರಾತ್ರಿಯಲ್ಲಿ ಪವಾಡ ನಡೆದಿದೆ.ಅದ್ಭುತ ಮಹಾಪುರುಷರೊಬ್ಬರ ಯಾಗದ ಫಲದಿಂದ ದೊಡ್ಡ ತೊಂದರೆ ನಿವಾರಣೆಯಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ವರುಣನ ಅಬ್ಬರಕ್ಕೆ ಇಡೀ ಶೃಂಗೇರಿಯೇ ಮುಳುಗುವ ಸ್ಥಿತಿಗೆ ಬಂದಿತ್ತು. ತುಂಗೆಯ ತಟದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ಆದರೆ ರಾತ್ರೋರಾತ್ರಿ ವರುಣನ ಅಬ್ಬರ ಸಂಪೂರ್ಣ ತಣ್ಣಗಾಗಿದೆ. 

ಭಾರತೀ ತೀರ್ಥ ಶ್ರೀಗಳ ವಿಶೇಷ ಯಾಗದ ಫಲದಿಂದ ಈ ಪವಾಡ ಸಂಭವಿಸಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಮಳೆ ಕಡಿಮೆಯಾಗಲು ಜಗದ್ಗುರುಗಳು ವಿಶೇಷ ಯಾಗವನ್ನು ಕೈಗೊಂಡಿದ್ದರು. ಪೂಜೆಯಫಲದಿಂದ ಬಹುದೊಡ್ಡ ಗಂಡಾಂತರ ನಿವಾರಣೆಯಾಗಿದೆ ಎಂಬುದು ಶ್ರೀಕ್ಷೇತ್ರದ ಭಕ್ತರ ನಂಬಿಕೆಯಾಗಿದೆ.

ಮಳೆಗೆ ಹಲವು ಕಡೆ ತೊಂದರೆ

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿದ ಮಹಾಮಳೆಗೆ ರಸ್ತೆ-ಹಳ್ಳ-ಕೊಳ್ಳಗಳು ಕೊಚ್ಚಿ ಹೋಗಿ, ಗುಡ್ಡಗಳು ಕುಸಿದು ಬಿದ್ದಿವೆ. ಭದ್ರಾ ನದಿಯ ನೀರಿನ ರಭಸಕ್ಕೆ ಹೊರನಾಡು ಅನ್ನಪೂಣೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಶಿಥಿಲಾವಸ್ಥೆ ತಲುಪಿದೆ. ನೀರಿನ ರಭಸಕ್ಕೆ ಸೇತುವೆಯ ಇಕ್ಕೆಲಗಳಲ್ಲಿದ್ದ ತಡೆಗೋಡೆಯ ಕಂಬಗಳು ಕೂಡ ಮುರಿದು ಬಿದ್ದು, ಸೇತುವೆಯೂ ಪಾಳು ಬಿಟ್ಟು ಹೋಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!