ಸೌದಿಯಲ್ಲಿ ಜಮೀರ್ ರಂಜಾನ್: ದೇವರಲ್ಲಿ ಪ್ರಾರ್ಥಿಸಿದ್ದೇನು?

Published : Jun 15, 2018, 04:21 PM IST
ಸೌದಿಯಲ್ಲಿ ಜಮೀರ್ ರಂಜಾನ್: ದೇವರಲ್ಲಿ ಪ್ರಾರ್ಥಿಸಿದ್ದೇನು?

ಸಾರಾಂಶ

ಸೌದಿಯಲ್ಲಿ ಪವಿತ್ರ ರಂಜಾನ್ ಆಚರಿಸುತ್ತಿರುವ ಜಮೀರ್ ಅಹ್ಮದ್ ಉಮರಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಚಿವ ಆಪ್ತರ ಸಮೇತ ಉಮರಾದಲ್ಲಿ ವಿಶೇಷ ರಂಜಾನ್ ಪ್ರಾರ್ಥನೆ ಕರ್ನಾಟಕದ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥನೆ     

ರಿಯಾದ್[ಜೂ.೧೫]: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನೂತನ ಸಚಿವರಾಗಿ ನೇಮಕವಾಗಿರುವ ಜಮೀರ್ ಅಹ್ಮದ್ ಖಾನ್, ಸೌದಿ ಅರೆಬಿಯಾದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ.

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಚಿವ ಜಮೀರ್ ಅಹ್ಮದ್, ಸೌದಿಯ ಉಮರಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಬಾರಿಯ ರಂಜಾನ್ ಹಬ್ಬವನ್ನು ಸೌದಿಯಲ್ಲೇ ಆಚರಿಸಲು ನಿರ್ಧರಿಸಿದ್ದ ಜಮೀರ್, ಅದತರಂತೆ ಆಪ್ತರ ಸಮೇತ ಉಮರಾಗೆ ಬಂದಿಳಿದಿದ್ದಾರೆ.

ಕರ್ನಾಟಕ ರಾಜ್ಯದ ಜನರಿಗೆ ಒಳಿತಾಗಲಿ, ಪವಿತ್ರ ರಂಜಾನ್ ಹಬ್ಬ ಎಲ್ಲರಿಗೂ ಶುಭ ನೀಡಲಿ ಎಂದು ಜಮೀರ್ ಪ್ರಾರ್ಥಿಸಿದ್ದಾಗಿ ಮೂಲಗಳು ತಿಳಿಸಿವೆ.  ದೇಶದ ಹಾಗೂ ರಾಜ್ಯದ  ಜನರಿಗೆ  ಆರೋಗ್ಯ ಸುಖ ಸಂಪತ್ತು ಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾಗಿ ಜಮೀರ್ ಕೂಡ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ