‘ಬಿಜೆಪಿಗೆ ಮಕ್ಕಳ ಹೆರುವ ಶಕ್ತಿ ಇಲ್ಲ’

Published : Nov 19, 2017, 10:58 AM ISTUpdated : Apr 11, 2018, 12:47 PM IST
‘ಬಿಜೆಪಿಗೆ ಮಕ್ಕಳ ಹೆರುವ ಶಕ್ತಿ ಇಲ್ಲ’

ಸಾರಾಂಶ

ಕಾಂಗ್ರೆಸ್‌ನ ಪ್ರಭಾವಿಗಳನ್ನು ಹೆದರಿಸಿ ದತ್ತು ಪಡೆಯಲು ಪ್ರಯತ್ನ: ಸಚಿವರ ಕುಲಕರ್ಣಿ ಆರೋಪ

ಧಾರವಾಡ: ಬಿಜೆಪಿಗೆ ಮಕ್ಕಳನ್ನು ಹೆರುವ ಶಕ್ತಿ ಇಲ್ಲ. ಹೀಗಾಗಿ ಕಾಂಗ್ರೆಸ್‌ನಿಂದ ಪ್ರಭಾವಿ ನಾಯಕರನ್ನು ದತ್ತು  ತೆಗೆದುಕೊಳ್ಳಲು  ಪ್ರಯತ್ನಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯು ಬ್ಲ್ಯಾಕ್ ಮೇಲ್ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌’ನ ಪ್ರಭಾವಿಗಳನ್ನು ಹೆದರಿಸಲು ಐಟಿ ದಾಳಿಯ ದಾರಿ ಕಂಡುಕೊಂಡಿದೆ. ಆದರೆ, ಡಿ.ಕೆ. ಶಿವಕುಮಾರ್ ಅವರಾಗಲಿ, ಪ್ರಮೋದ್ ಮಧ್ವರಾಜ್ ಅವರಾಗಲಿ ಯಾವತ್ತೂ ಬಿಜೆಪಿ ಸೇರಲ್ಲ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಧರ್ಮ ಹೋರಾಟ ನಿರಂತರ: ಪ್ರತ್ಯೇಕ ಲಿಂಗಾಯತ ಧರ್ಮ ವಿರುದ್ಧದ ಹೋರಾಟ ನಿರಂತರ. ಈ ಕುರಿತು ಸೌಹಾರ್ದ ಮಾತುಕತೆಗೆ ಪಂಚಪೀಠಾಧೀಶರಿಗೆ ಮನವಿ ಮಾಡಿದ್ದೇವೆ. ಶ್ರೀಗಳ ಬಗ್ಗೆ ನಮಗೆ ಗೌರವ ಇದೆ. ವೀರಶೈವರು, ಲಿಂಗಾಯತರು ಬೇರೆ ಬೇರೆ ಅಲ್ಲ. ನಾವು ಪ್ರತ್ಯೇಕ ಧರ್ಮ ಮಾತ್ರ ಕೇಳುತ್ತಿದ್ದೇವೆ. ಅವರು ಎಂದೂ ನಮ್ಮನ್ನು, ತಮ್ಮವರೆಂದು ಪರಿಗಣಿಸಿಲ್ಲ. ಒಂದು ವೇಳೆ ಶ್ರೀಗಳು ಮಾತುಕತೆಗೆ ಆಹ್ವಾನಿಸಿದರೆ ನಾನು ಹೋಗಲು ಸಿದ್ಧ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

10 ದಿನ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ
ಗ್ಯಾರಂಟಿಯಿಂದಾಗಿ ತಲಾ ಆದಾಯದಲ್ಲಿ ರಾಜ್ಯ ನಂ.1 : ಸಿದ್ದರಾಮಯ್ಯ