ಹಲವು ಸಮಸ್ಯೆಗಳಿಗೆ ಹಲೋ ಮಿನಿಸ್ಟರ್'ನಲ್ಲಿ ಉಮಾಶ್ರೀ ಪರಿಹಾರ

Published : Sep 17, 2017, 08:49 PM ISTUpdated : Apr 11, 2018, 12:48 PM IST
ಹಲವು ಸಮಸ್ಯೆಗಳಿಗೆ ಹಲೋ ಮಿನಿಸ್ಟರ್'ನಲ್ಲಿ ಉಮಾಶ್ರೀ ಪರಿಹಾರ

ಸಾರಾಂಶ

ಬೆಂಗಳೂರಿನಿಂದ ಕರೆ ಮಾಡಿದ ವಿಕಲಚೇತನಾ ಮಹಿಳೆ ಭಾರತಿ ಲಕ್ಷ್ಮಿ ನನಗೆ ಯಂತ್ರ ಚಾಲಿತ ವಾಹನ ಕೊಟ್ಟಿಲ್ಲ ಅಂತ ಸಚಿವೆ ಉಮಾಶ್ರೀಗೆ ನೇರವಾಗಿ ಪ್ರಶ್ನೆ ಮಾಡಿದರು. ಅದಕ್ಕೆ ಸಚಿವೆ ಉಮಾಶ್ರೀ ಸ್ಪಷ್ಟನೆ ನೀಡಿದರು

ಸುವರ್ಣನ್ಯೂಸ್​​​​ನ ವಿನೂತನ ಮತ್ತು ವಿಭಿನ್ನ ಪ್ರಯತ್ನಕ್ಕೆ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಮಾತೃ ಹೃದಯದ ಸಚಿವೆ ಉಮಾಶ್ರೀ ಹಲೋ ಮಿನಿಸ್ಟರ್ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಟುಡಿಯೋದಿಂದಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡುವುದರ ಜೊತೆಗೆ ಹಲವು ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮೊದಲ ಬಾರಿ ಸುವರ್ಣನ್ಯೂಸ್​ನ ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ಬಂದಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರದ ಭರವಸೆ ನೀಡಿದರು. ಮೊದಲು ಕರೆ ಮಾಡಿದ ಗೀತಾ ಗಂಗಾವತಿ ಅಂಗನವಾಡಿಯಲ್ಲಿ 3 ತಿಂಗಳಿಗೆ ಅರ್ಧ ಲೀ.​ ನ್ಯೂಟ್ರಿಶಿಯನ್​ ಪ್ಯಾಕೆಟ್​​​​ ಕೊಡ್ತಾರೆ ಇದು ಸಾಕಾಗಲ್ಲ ಎಂದರು. ಅದಕ್ಕೆ ಸಚಿವೆ ಉಮಾಶ್ರೀ ಸ್ಟುಡಿಯೋದಲ್ಲಿಯೇ ಸ್ಪಷ್ಟನೆ ನೀಡಿದರು.

ಸಮಸ್ಯೆ ಈಡೇರಿಕೆಗೆ ಭರವಸೆ

ಬಾಗಲಕೋಟೆ ಸಂತ್ರಸ್ತರ ವಾರ್ಡ್​​ನ 23ನೇ ಅಂಗನವಾಡಿಯಲ್ಲಿ ಚಿಕ್ಕ ಕೋಣೆಯಲ್ಲಿ 30 ಮಕ್ಕಳಿದ್ದಾರೆ. ಬೇಗ ಸಮಸ್ಯೆ ಬಗೆಹರಿಸಿಕೊಡಿ ಅಂತಾ ಬಸವರಾಜ್​​ ಕರೆ ಮಾಡಿದ್ದರು. ಈ ವೇಳೆ ಸಚಿವೆ ಉಮಾಶ್ರೀ ಸಹಾಯಕ ನಿರ್ದೇಶಕ ಹೊರಬಟ್ಟಿ ಜೊತೆಯೂ ಮಾತನಾಡಿ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಸೂಚಿಸಿದರು.

ಬೆಂಗಳೂರಿನಿಂದ ಕರೆ ಮಾಡಿದ ವಿಕಲಚೇತನಾ ಮಹಿಳೆ ಭಾರತಿ ಲಕ್ಷ್ಮಿ ನನಗೆ ಯಂತ್ರ ಚಾಲಿತ ವಾಹನ ಕೊಟ್ಟಿಲ್ಲ ಅಂತ ಸಚಿವೆ ಉಮಾಶ್ರೀಗೆ ನೇರವಾಗಿ ಪ್ರಶ್ನೆ ಮಾಡಿದರು. ಅದಕ್ಕೆ ಸಚಿವೆ ಉಮಾಶ್ರೀ ಸ್ಪಷ್ಟನೆ ನೀಡಿದರು. ಕೊನೆಯಲ್ಲಿ ಮಾತನಾಡಿದ ಸ್ನೇಹಿತೆ, ನಟಿ ಜಯಾಮಾಲಾ ಉಮಾಶ್ರೀಗೆ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ ಜನರ ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲೇ ಪರಿಹಾರ ನೀಡುವುದರ ಜೊತೆ ಇನ್ನೂ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ಸುವರ್ಣನ್ಯೂಸ್‌ನ ವಿಭಿನ್ನ ಕಾರ್ಯಕ್ರಮಕ್ಕೆ  ಧನ್ಯವಾದ ಕೂಡ ತಿಳಿಸಿದರು.

-ಜೆ. ಎಸ್​.ಪೂಜಾರ್​​, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ