'ದೇಶದ ಜನರಿಗೆ ಮೋದಿ ಯಾರೂ ಎಂದೇ ಗೊತ್ತಿಲ್ಲ': ಖಾದರ್ ವ್ಯಂಗ್ಯ

Published : Apr 04, 2017, 10:32 AM ISTUpdated : Apr 11, 2018, 01:06 PM IST
'ದೇಶದ ಜನರಿಗೆ ಮೋದಿ ಯಾರೂ ಎಂದೇ ಗೊತ್ತಿಲ್ಲ': ಖಾದರ್ ವ್ಯಂಗ್ಯ

ಸಾರಾಂಶ

ಅನ್ನಭಾಗ್ಯ ಯೋಜನೆಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನೂ ಹಾಕಬೇಕು ಅಂತ ಬಿಜೆಪಿ ನಾಯಕರು ಹೇಳುತ್ತಾರೆ ಅನ್ನೋದಾದ್ರೇ, ದೇಶದ ಜನರಿಗೆ ಮೋದಿ ಯಾರೂ ಎಂದೇ ಗೊತ್ತಿಲ್ಲ ಎಂದಂತಾಯಿತು - ಹೀಗೆ ಬಿಜೆಪಿ ನಾಯಕರ ವ್ಯಂಗ್ಯವಾಡಿದ್ದು ಆಹಾರ ಸಚಿವ ಯು.ಟಿ. ಖಾದರ್!

ಬೆಂಗಳೂರು (ಏ.04): ಅನ್ನಭಾಗ್ಯ ಯೋಜನೆಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನೂ ಹಾಕಬೇಕು ಅಂತ ಬಿಜೆಪಿ ನಾಯಕರು ಹೇಳುತ್ತಾರೆ ಅನ್ನೋದಾದ್ರೇ, ದೇಶದ ಜನರಿಗೆ ಮೋದಿ ಯಾರೂ ಎಂದೇ ಗೊತ್ತಿಲ್ಲ ಎಂದಂತಾಯಿತು - ಹೀಗೆ ಬಿಜೆಪಿ ನಾಯಕರ ವ್ಯಂಗ್ಯವಾಡಿದ್ದು ಆಹಾರ ಸಚಿವ ಯು.ಟಿ. ಖಾದರ್!

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು, ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು ಎಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಹೇಳಿದ್ದಾರೆ. ಆದರೆ ಆಹಾರ ಭದ್ರತಾ ಕಾಯ್ದೆ ತಂದ ಯುಪಿಎ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆಯ ಕ್ರೆಡಿಟ್ ಸಲ್ಲಬೇಕು. ಆಹಾರ ಭದ್ರತಾ ಕಾಯ್ದೆ ಜಾರಿಯಾಗುವ ಮುನ್ನವೇ ಅನ್ನಭಾಗ್ಯ ಯೋಜನೆ ಘೋಷಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಈ ಯೋಜನೆಯ ಕ್ರೆಡಿಟ್ ಸಲ್ಲಬೇಕು. ಈ ಯೋಜನೆಗೆ ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 24 ರೂಪಾಯಿ ಕೊಡ್ತಿರೋದು ನಿಜ. ಹಾಗೇ ನಾವು ಪ್ರತಿ ಕೆಜಿ ಅಕ್ಕಿಗೆ ಮೂರು ರೂ ನೀಡುತ್ತಿರುವುದೂ ನಿಜ. ಆದರೆ ಈ ಯೋಜನೆ ಮೂಲ ಯುಪಿಎ ಸರ್ಕಾರ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆ ಅಂತ ಖಾದರ್ ವಿಶ್ಲೇಷಿಸಿದ್ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
ಪ್ರಾಜೆಕ್ಟ್ ಖುಷಿ 3 ತಿಂಗಳ ಸ್ವಾಸ್ಥ್ಯ ಅಭಿಯಾನದಲ್ಲಿ ಹಲವು ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಂಡ ಬೆಂಗಳೂರು ಪೊಲೀಸ್!