ಸಚಿವರ ಕಾರು ಅಪಘಾತ :ಆಸ್ಪತ್ರೆಗೆ ದಾಖಲು

By Suvarna Web DeskFirst Published Dec 1, 2016, 6:00 PM IST
Highlights

ಕಲಾಪಗಳನ್ನುಮುಗಿಸಿನಗರಕ್ಕೆಮರಳುತ್ತಿದ್ದಾಗಹಲಗಾಸಮೀಪಪ್ರಯಾಣಿಕರನ್ನುಹೊತ್ತೊಯ್ಯುತ್ತಿದ್ದಮೆಟಾಡೋರ್ಗೆಸಚಿವರಕಾರುಡಿಕ್ಕಿಹೊಡೆದಿದೆ.

ಬೆಳಗಾವಿ(ಡಿ.1): ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಕಾರು ಗುರುವಾರ ಹಲಗಾ ಸಮೀಪ ಅಪಘಾತಕ್ಕೀಡಾಗಿದ ಪರಿಣಾಮ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಳಿಗಾಲದ ಅವೇಶನದ ಕಲಾಪಗಳನ್ನು ಮುಗಿಸಿ ನಗರಕ್ಕೆ ಮರಳುತ್ತಿದ್ದಾಗ ಹಲಗಾ ಸಮೀಪ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೆಟಾಡೋರ್‌ಗೆ ಸಚಿವರ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಮುಂಬದಿ ಕುಳಿತಿದ್ದ ಸಚಿವ ರಮೇಶ್ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸುರಕ್ಷಿತವಾಗಿದ್ದಾರೆ. ಅಪಘಾತ ನಡೆದ ತಕ್ಷಣ ಅವರನ್ನು ಸಮೀಪದ ಲೇಕ್‌ವ್ಯೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ಬಳಿಕ ಮನೆಗೆ ತೆರಳಿದ್ದಾರೆ.

click me!