ಚೆಕ್​​ ಬೌನ್ಸ್​ ಪ್ರಕರಣ: ಸಂಕಷ್ಟದಲ್ಲಿ ಸಿಲುಕಿರುವ ಸಚಿವ ಸಂತೋಷ್​ ಲಾಡ್​​

Published : Jun 19, 2017, 09:39 PM ISTUpdated : Apr 11, 2018, 12:48 PM IST
ಚೆಕ್​​ ಬೌನ್ಸ್​ ಪ್ರಕರಣ: ಸಂಕಷ್ಟದಲ್ಲಿ ಸಿಲುಕಿರುವ ಸಚಿವ ಸಂತೋಷ್​ ಲಾಡ್​​

ಸಾರಾಂಶ

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​ ಅವರಿಗೆ ನೀಡಿದ್ದ ಚೆಕ್​​ ಬೌನ್ಸ್​ ಪ್ರಕರಣದಲ್ಲಿ ಸಚಿವ ಸಂತೋಷ್​ ಲಾಡ್​​ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು (ಜೂ.19): ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​ ಅವರಿಗೆ ನೀಡಿದ್ದ ಚೆಕ್​​ ಬೌನ್ಸ್​ ಪ್ರಕರಣದಲ್ಲಿ ಸಚಿವ ಸಂತೋಷ್​ ಲಾಡ್​​ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಕ್​​ಲೈನ್​ ವೆಂಕಟೇಶ್​ ಸಲ್ಲಿಸಿದ್ದ ದೂರಿನ ತೀರ್ಪು ನೀಡಿದ 42 ಎಸಿಎಂಎಂ ಕೋರ್ಟ್ 7.25 ಕೋಟಿ ರೂಪಾಯಿ ನೀಡುವಂತೆ ಆದೇಶಿಸಿದೆ. 2014ರಲ್ಲಿ ಸಂತೋಷ್​ ಲಾಡ್​​ ವೈಯಕ್ತಿಕ ಸಮಸ್ಯೆಗಾಗಿ 6 ಕೋಟಿ ರೂಪಾಯಿ ಸಾಲವಾಗಿ ಪಡೆದಿದ್ದರು. ಅದಕ್ಕೆ ಸಂತೋಷ್​ ಲಾಡ್​ ನೀಡಿದ್ದ  6 ಕೋಟಿ ರೂಪಾಯಿ ಚೆಕ್​​ ಬೌನ್ಸ್​ ಆಗಿತ್ತು. ಈ ಸಂಬಂಧ ರಾಕ್​​ಲೈನ್​​ ಸಲ್ಲಿಸಿದ್ದ ದೂರಿನಲ್ಲಿ ಹಲವು ಬಾರಿ ನೋಟಿಸ್​​ ನೀಡಿದ್ರು, ಸಂತೋಷ್​ ಲಾಡ್​ ಕೊರ್ಟ್​ಗೆ ಹಾಜರಾಗಿರಲಿಲ್ಲ. ಇಂದು ತೀರ್ಪು ನೀಡಿದ ಕೋರ್ಟ್​​ ಹಣ ನೀಡದಿದ್ದಲ್ಲಿ 6 ತಿಂಗಳು ಸೆರೆವಾಸ ನೀಡುವುದಾಗಿ ಎಚ್ಚರಿಸಿದೆ. ಇದೇ ವೇಳೆ ಸಂತೋಷ್​ ಲಾಡ್​ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿ ಕೋರ್ಟ್​​ ಒಂದು ತಿಂಗಳ ಕಾಲ ಜಾಮೀನು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ