ಕಾವೇರಿ ನೀರು: ನೂತನ ಸಂಸದರು ನೋಡ್ಕೋತಾರೆ, ಸಚಿವರೇ ಇದೇನಾ ನಿಮ್ಮ ಒಗ್ಗಟ್ಟು..?

Published : May 28, 2019, 06:34 PM ISTUpdated : May 28, 2019, 06:51 PM IST
ಕಾವೇರಿ ನೀರು: ನೂತನ ಸಂಸದರು ನೋಡ್ಕೋತಾರೆ, ಸಚಿವರೇ ಇದೇನಾ ನಿಮ್ಮ ಒಗ್ಗಟ್ಟು..?

ಸಾರಾಂಶ

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವನ್ನು ಸಚಿವರೊಬ್ಬರು ರಾಜ್ಯದ ನೂತನ ಸಂಸದರ ಮೇಲೆ ಹಾಕಿ ತಾವು ಜಾರಿಕೊಂಡಿದ್ದಾರೆ. 

ಮೈಸೂರು, [ಮೇ.28]: ಕಾವೇರಿ ನಾಲೆಯಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವ ವಿಚಾರವನ್ನು ನೂತನವಾಗಿ ಆಯ್ಕೆಯಾಗಿರುವ ಸಂಸದರು ನೋಡಿಕೊಳ್ಳುತ್ತಾರೆ ಎಂದು ಸಚಿವ ಸಾರಾ ಮಹೇಶ್​ ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದಿಂದ 24 ಸಂಸದರು ಆಯ್ಕೆಯಾಗಿದ್ದಾರೆ. ಅದ್ರಲ್ಲಿ ಹಲವು ಹಿರಿಯರಿದ್ದಾರೆ. ಈ ಬಗ್ಗೆ ಬರುವ ಕಾನೂನಾತ್ಮಕ ತೊಡಕುಗಳನ್ನ ಅವರು ಬಗೆಹರಿಸುತ್ತಾರೆ ಎಂದು ಓರ್ವ ರಾಜ್ಯದ ಮಂತ್ರಿಯಾಗಿ  ಬೇಜವಾಬ್ದಾರಿ ಮಾತುಗಳನ್ನಾಡಿದರು. 

ಕಾವೇರಿ ನದಿ ನೀರು ಹಂಚಿಕೆ: ಕರ್ನಾಟಕಕ್ಕೆ ಆಘಾತ..!

ಕಾವೇರಿ ನದಿ ನೀರು ಹಂಚಿಕೆಯಲ್ಲಿ ಓರ್ವ ರಾಜ್ಯದ ಮಿನಿಸ್ಟರ್ ಆಗಿ ಎಲ್ಲರೂ ಒಗ್ಗಾಟಗಿರಬೇಕು. ಆದ್ರೆ, ಇದೀಗ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಈ ರೀತಿ ಹೇಳಿಕೆ ನೀಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ರಾಜ್ಯದಲ್ಲಿ ತಮ್ಮ ಸರ್ಕಾರ ಇಟ್ಟುಕೊಂಡು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕೆ ವಿನಃ, ಈ ರೀತಿಯ ಬೇಜವಾಬ್ದಾರಿ ಹೇಳಿಕೆ ಸಲ್ಲ.  ಕಾವೇರಿಯ ವಿಷಯದಲ್ಲಿ ಒಗ್ಗಟ್ಟು ಒಗ್ಗಟ್ಟು ಎಂದು ಉದ್ದುದ್ದ ಭಾಷಣ ಮಾಡುವವರು ಇದೇನಾ ನಿಮ್ಮ ಒಗ್ಗಟ್ಟು..?

ರಾಜ್ಯದ ಜಲ, ನೆಲ, ಭಾಷೆ ವಿಷಯ ಬಂದಾಗ ಒಗ್ಗಟ್ಟು ಪ್ರದಶೀಸಬೇಕು.ಇಂತಹ ವಿಚಾರಗಳಲ್ಲಿ ಸುಖಾಸುಮ್ಮನೆ ರಾಜಕೀಯ ಮಾಡುವುದು ಸರಿಯಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು