ಸಚಿವ ಸ್ಥಾನದಲ್ಲಿ ಜಯಮಾಲಾ ಸೇಫ್‌ ಆಗಿದ್ದು ಹೇಗೆ..?

Published : Dec 23, 2018, 08:47 AM IST
ಸಚಿವ ಸ್ಥಾನದಲ್ಲಿ ಜಯಮಾಲಾ ಸೇಫ್‌ ಆಗಿದ್ದು ಹೇಗೆ..?

ಸಾರಾಂಶ

 ಕನ್ನಡ ಮತ್ತು ಸಂಸ್ಕೃತಿ ಖಾತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರಾದ ಡಾ. ಜಯಮಾಲಾ ಅವರನ್ನು ಸಂಪುಟದಿದ ಕೈ ಬಿಡುವ ಬಗ್ಗೆ ತೀವ್ರ ಚರ್ಚೆಯಾದರೂ ಸಂಪುಟ ವಿಸ್ತರಣೆ ವೇಳೆ ಜಯಮಾಲಾ ಬಚಾವಾಗಿದ್ದಾರೆ. 

ಬೆಂಗಳೂರು :  ಕನ್ನಡ ಮತ್ತು ಸಂಸ್ಕೃತಿ ಖಾತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರಾದ ಡಾ. ಜಯಮಾಲಾ ಅವರನ್ನು ಸಂಪುಟದಿದ ಕೈ ಬಿಡುವ ಬಗ್ಗೆ ತೀವ್ರ ಚರ್ಚೆಯಾದರೂ ಸಂಪುಟ ವಿಸ್ತರಣೆ ವೇಳೆ ಜಯಮಾಲಾ ಬಚಾವಾಗಿದ್ದಾರೆ. 

ಜಯಮಾಲಾ ಅವರಿಗೆ ಸಚಿವ ಸ್ಥಾನ ದೊರೆತಾಗಲೇ ಕಾಂಗ್ರೆಸ್‌ನ ಹಲವರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಲಕ್ಷ್ಮೇ ಹೆಬ್ಬಾಳ್ಕರ್‌ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. 

ಇದೀಗ ಶಾಸಕಿಯೊಬ್ಬರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಜಯಮಾಲಾ ಅವರನ್ನು ಕೈಬಿಡಲಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಜಯಾ​ಮಾಲಾ ಅವ​ರನ್ನು ಸಂಪು​ಟ​ದಿಂದ ಕೈಬಿಟ್ಟು ಅವರ ಬದ​ಲಿಗೆ ಲಕ್ಷ್ಮೇ ಹೆಬ್ಬಾ​ಳ​ಕರ್‌ ಅಥವಾ ಅಂಜಲಿ ನಿಂಬಾ​ಳ್ಕರ್‌ ಅವ​ರಿಗೆ ಅವ​ಕಾಶ ನೀಡ​ಲಾ​ಗು​ತ್ತದೆ ಎಂದು ಹೇಳ​ಲಾ​ಗಿ​ತ್ತು. 

ಆದರೆ, ರಾಜ್ಯ ಉಸ್ತು​ವಾರಿ ಕೆ.ಸಿ.ವೇಣು​ಗೋ​ಪಾಲ್‌, ಸಿದ್ದ​ರಾ​ಮಯ್ಯ ಹಾಗೂ ಬಿ.ಕೆ. ಹರಿ​ಪ್ರ​ಸಾದ್‌ ಅವರ ಸಂಘ​ಟಿತ ಪ್ರಯ​ತ್ನದ ಫಲ​ವಾಗಿ ಜಯ​ಮಾಲಾ ಅವರು ಖಾತೆ ಉಳಿ​ದು​ಕೊಂಡಿದೆ ಎಂದು ಮೂಲ​ಗಳು ತಿಳಿ​ಸಿ​ವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹುಬ್ಬಳ್ಳಿ ಮರ್ಯಾದಾ ಹತ್ಯೆ ಮಾಸುವ ಮುನ್ನವೇ, ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಜಾತಿ ದ್ವೇಷಕ್ಕೆ ಬಲಿ!
ವಿಶ್ವದ ಅಪರೂಪದ ರತ್ನ ಧರಿಸಿ ಸೊಸೆಯ ಅಮ್ಮನ ಬರ್ತಡೆಯಲ್ಲಿ ಮಿಂಚಿದ ನೀತಾ ಅಂಬಾನಿ