‘ಇಲ್ಲಿ ಮಳೆಗಾಗಿ ಮೊರೆ ಹೋದ್ರೆ ಮಳೆಯಾಗೋದು ಖಚಿತ’

Published : Jun 07, 2019, 09:40 AM IST
‘ಇಲ್ಲಿ ಮಳೆಗಾಗಿ ಮೊರೆ ಹೋದ್ರೆ ಮಳೆಯಾಗೋದು ಖಚಿತ’

ಸಾರಾಂಶ

ಈ ಕ್ಷೇತ್ರದಲ್ಲಿ ಮಳೆಗಾಗಿ ಪ್ರಾರ್ಥನೆ ಮಾಡಿದಲ್ಲಿ ರಾಜ್ಯಕ್ಕೆ ಮಳೆಯಾಗುವುದು ಖಚಿತ. ಪುಣ್ಯ ಕ್ಷೇತ್ರವಾದ ಇಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ಮಳೆ ಸುರಿಯಲು ಕಾರಣವಾಗುತ್ತದೆ. 

ಶೃಂಗೇರಿ :  ಕಿಗ್ಗಾ ವಿಶೇಷವಾದ ಪುಣ್ಯಕ್ಷೇತ್ರ. ಇದು ದೇವತೆಗಳ, ಋುಷಿಮುನಿಗಳ ತಪೋಭೂಮಿ. ಇಲ್ಲಿ ಮಳೆಗಾಗಿ ಮೊರೆ ಹೋದರೆ ರಾಜ್ಯಕ್ಕೆ ಮಳೆಯಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ತಾಲೂಕಿನ ಕಿಗ್ಗಾ ಶ್ರೀ ಋುಷ್ಯಶೃಂಗೇಶ್ವರ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ, ಪರ್ಜನ್ಯಜಪ, ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದೆ ನಾನು ಸಚಿವನಾಗಿದ್ದಾಗ ರಾಜ್ಯದಲ್ಲಿ ಮಳೆಯಿಲ್ಲದೇ ಬರ ಉಂಟಾಗಿ ನೀರಿಗಾಗಿ ಜನ ತತ್ತರಿಸಿದ್ದರು. ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆ ವತಿಯಿಂದ ಎರಡು ಬಾರಿ ನಾನು ಮಳೆಗಾಗಿ ಪೂಜೆ, ಪರ್ಜನ್ಯ ಜಪ ಮಾಡಿಸಿದ್ದೆ. 

ಆ ಬಳಿಕ ರಾಜ್ಯದಲ್ಲಿ ಉತ್ತಮ ಮಳೆಯೂ ಆಗಿತ್ತು. ಈ ಬಾರಿಯೂ ಮಳೆಯಾಗಲಿದೆ ಎಂಬ ವಿಶ್ವಾಸವಿದೆ ಎಂದರು. ಶ್ರಮವಿದ್ದಲ್ಲಿ ಫಲವಿದೆ. ಭಕ್ತಿಯಿದ್ದಲ್ಲಿ ಭಗವಂತನಿದ್ದಾನೆ. ಮನಸಿದ್ದಲ್ಲಿ ಮಾರ್ಗವಿದೆ. ಭವಂತನಲ್ಲಿ ಭಕ್ತಿ, ನಂಬಿಕೆಯಿಟ್ಟರೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಸಚಿವ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ