'ಬಂಗಾಳಿ ಯುವಕರು ಕಸ ಹೊಡಿತಾರೆ, ಯುವತಿಯರು ಬಾರ್‌ ಡಾನ್ಸರ್‌ ಆಗ್ತಾರೆ'

Published : Jun 07, 2019, 09:28 AM IST
'ಬಂಗಾಳಿ ಯುವಕರು ಕಸ ಹೊಡಿತಾರೆ, ಯುವತಿಯರು ಬಾರ್‌ ಡಾನ್ಸರ್‌ ಆಗ್ತಾರೆ'

ಸಾರಾಂಶ

ಬಂಗಾಳಿ ಯುವಕರು ಕಸ ಹೊಡಿತಾರೆ, ಯುವತೀರು ಬಾರ್‌ ಡಾನ್ಸರ್‌ ಆಗ್ತಾರೆ| ಮೇಘಾಲಯ ರಾಜ್ಯಪಾಲರ ವಿವಾದಿತ ಹೇಳಿಕೆ

ಷಿಲ್ಲಾಂಗ್‌[ಜೂ.07]: ಶಾಲೆಗಳಲ್ಲಿ ಹಿಂದಿ ಹೇರಿಕೆ ಕುರಿತು ಭಾರೀ ವಿವಾದ ಎದ್ದಿರುವಾಗಲೇ, ಹಿಂದಿ ಕಲಿಯುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಂಗಾಳಿಗಳನ್ನು, ಪಶ್ಚಿಮ ಬಂಗಾಳ ಮೂಲದವರಾಗಿರುವ ಮೇಘಾಲಯದ ರಾಜ್ಯಪಾಲ ತಥಾಗತ್‌ ರಾಯ್‌ ವ್ಯಂಗ್ಯವಾಡಿದ್ದಾರೆ.

‘ಬಂಗಾಳಿಗಳು ಹಿಂದಿ ಕಲಿಯುವುದಕ್ಕೆ ವಿರೋಧ ವ್ಯಕ್ತಪಡಿಸುವುದಕ್ಕೆ ಯಾವುದೇ ಸೂಕ್ತ ಕಾರಣ ಇಲ್ಲ. ಅದೇನಿದ್ದರೂ, ರಾಜಕೀಯ ಉದ್ಧೇಶ ಹೊಂದಿರುವಂಥದ್ದಷ್ಟುಅಷ್ಟೇ. ಬುದ್ಧಿಜೀವಿಗಳು ಎಂಬ ಬಂಗಾಳಿಗಳ ಹಿರಿತನ ಹೋಗಿ ಯಾವುದೋ ಸಮಯವಾಗಿದೆ. ಈಗೇನಿದ್ದರೂ, ಬಂಗಾಳಿ ಯುವಕರು ದೇಶಾದ್ಯಂತ ಕಸ ಹೊಡೆಯುವ ಕೆಲಸಕ್ಕೆ ಸೀಮಿತವಾಗಿದ್ದರೆ, ಯುವತಿಯರು ಮುಂಬೈನ ಬಾರ್‌ಗಳಲ್ಲಿ ಬಾರ್‌ ಡಾನ್ಸರ್‌ಗಳಾಗಿದ್ದಾರೆ’ ಎಂದಿದ್ದಾರೆ.

ಅವರ ಈ ವಿವಾದಿತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ