ಮಾಜಿ ಪ್ರಧಾನಿಗಳು ಹೊಳೆನರಸೀಪುರಕ್ಕೆ ಮಾತ್ರ ಸಂಸದರು

By Suvarna Web DeskFirst Published Nov 27, 2016, 6:14 PM IST
Highlights

ಕೇಂದ್ರದಸಿಆರ್ಎಫ್ನಿಧಿಯಲ್ಲಿಜಿಲ್ಲೆಯವಿವಿಧತಾಲೂಕುಗಳರಸ್ತೆಅಭಿವೃದ್ಧಿಗೆಕೇಂದ್ರದಿಂದ 108 ಕೋಟಿ ರೂ.ಬಿಡುಗಡೆಯಾಗಿದೆ. ಆದರೆ,

ಹೊಳೆನರಸೀಪುರ(ನ.27): ಕೇಂದ್ರದ ಮಂತ್ರಿಗಳಲ್ಲಿ ಪ್ರಭಾವ ಬೀರಿ ಜಿಲ್ಲೆಗೆ ಬಿಡುಗಡೆಯಾದ ಅನುದಾನದಲ್ಲಿ ಅರ್ಧದಷ್ಟನ್ನು ಹೊಳೆನರಸೀಪುರ ತಾಲೂಕು ಒಂದಕ್ಕೇ ಬಿಡುಗಡೆ ಮಾಡಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಜಿಲ್ಲೆಯ ಸಂಸದರೋ ಇಲ್ಲ, ಹೊಳೆನರಸೀಪುರ ತಾಲೂಕಿಗಷ್ಟೆ ಸಂಸದರೋ ಎಂಬ ಅನುಮಾನ ಮೂಡಿದೆ ಎಂದು ಸಚಿವ ಎ.ಮಂಜು ಕಿಡಿಕಾರಿದರು.

 ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಸಿಆರ್‌ಎಫ್ ನಿಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 108 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಅದರಲ್ಲಿ ಹೊಳೆನರಸೀಪುರ ತಾಲೂಕಿಗಷ್ಟೇ 60-70 ಕೋಟಿ ರೂ. ಬಿಡುಗಡೆಗೊಳಿಸಲು ದೇವೇಗೌಡರು ಕೇಂದ್ರದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ದೂರಿದರು.

click me!