ಲಂಚ ಕೇಳಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಹಲೋ ಮಿನಿಸ್ಟರ್'ನಲ್ಲಿ ಕೃಷ್ಣಪ್ಪ

Published : Jul 09, 2017, 08:58 PM ISTUpdated : Apr 11, 2018, 12:47 PM IST
ಲಂಚ ಕೇಳಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಹಲೋ ಮಿನಿಸ್ಟರ್'ನಲ್ಲಿ ಕೃಷ್ಣಪ್ಪ

ಸಾರಾಂಶ

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸ್ಲಮ್ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟರೂ ನೋಂದಣಿ ಮಾಡಿಸಿಲ್ಲವೆಂದು ಕಾರ್ಯಕ್ರಮದಲ್ಲಿ ನೋಂದ ನಾಗರಿಕರೊಬ್ಬರು ಕರೆ ಮಾಡಿ ಸಚಿವರಿಗೆ ಸಮಸ್ಯ ಹೇಳಿಕೊಂಡರು. ಕರೆ ಮಾಡಿದ 2 ಗಂಟೆಯಲ್ಲೇ ಸಚಿವರು ಮಂಡ್ಯದ ಹಾಲಹಳ್ಳಿ ಸ್ಲಂಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಕೂಡಲೇ  ಕ್ರಯ ಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.   

ಬೆಂಗಳೂರು(ಜು.09): ಹತ್ತು ಹಲವು ಸಮಸ್ಯೆಗಳು, ಕುಂತಲ್ಲೇ ಪರಿಹಾರ. ಇದು ಸುವರ್ಣ ನ್ಯೂಸ್ ಕಳೆದ ಹಲವು ತಿಂಗಳಿಂದ ನಡೆಸುತ್ತಿರೋವ ವಿಶೇಷ ಕಾರ್ಯಕ್ರಮ ಹಲೋ ಮಿನಿಸ್ಟರ್ .

ಈ ಬಾರಿ ವಸತಿ ಸಚಿವ  ಎಂ.ಕೃಷ್ಣಪ್ಪ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರಲ್ಲದೆ ಖುದ್ದು ತಾವೇ ಪರಿಹರಿಸುವುದಾಗಿ ಭರವಸೆ ನೀಡಿದರು.

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸ್ಲಮ್ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟರೂ ನೋಂದಣಿ ಮಾಡಿಸಿಲ್ಲವೆಂದು ಕಾರ್ಯಕ್ರಮದಲ್ಲಿ ನೋಂದ ನಾಗರಿಕರೊಬ್ಬರು ಕರೆ ಮಾಡಿ ಸಚಿವರಿಗೆ ಸಮಸ್ಯ ಹೇಳಿಕೊಂಡರು. ಕರೆ ಮಾಡಿದ 2 ಗಂಟೆಯಲ್ಲೇ ಸಚಿವರು ಮಂಡ್ಯದ ಹಾಲಹಳ್ಳಿ ಸ್ಲಂಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಕೂಡಲೇ  ಕ್ರಯ ಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.   

ಕಲಬುರಗಿಯಲ್ಲಿ ಕೇವಲ ಪಕ್ಷದ ಕಾರ್ಯಕರ್ತರಿಗೆ, ಲಂಚ ಕೋರರಿಗೆ ಮಾತ್ರ ಮನೆ ಮಂಜೂರು ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಸಚಿವರು, ಯಾರಾದರು ಲಂಚ ಕೇಳಿದರೆ ಅವರ ಬಗ್ಗೆ ನೇರವಾಗಿ ತಮಗೆ ಮಾಹಿತಿ ಕೊಡುವಂತೆ ತಿಳಿಸಿದರು.

ಇನ್ನು ಹುಬ್ಬಳಿಯಿಂದ ಕರೆಮಾಡಿದ್ದ  ವೈಶಾಲಿ ಎಂಬುವರು, ಮನೆಗಾಗಿ ತಾನು ಹಲವು ಬಾರಿ ಅರ್ಜಿ ಸಲ್ಲಿಸಿದರೂ ಮನೆ ಕೊಟ್ಟಿಲ್ಲ ಅಂತಾ ದುಃಖ ತೋರ್ಪಡಿಸಿಕೊಂಡರು. ಇವರ ನೋವನ್ನು ಆಲಿಸಿದ ಸಚಿವರು ಶೀಘ್ರದಲ್ಲಿಯೇ ಈ ಬಗ್ಗೆ ಮಾಹಿತಿ ಪಡೆದುಕೊಂಡು ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು.

ಪರಿಹಾರ ಪತ್ರಿಕೋದ್ಯಮದ ಪ್ರತೀಕವಾಗಿ ಪ್ರತಿ ವಾರ ಹಮ್ಮಿಕೊಳ್ಳುತ್ತಿರುವ ಸುವರ್ಣ ನ್ಯೂಸ್'ನ ಹಲೋ ಮಿನಿಸ್ಟರ್​ ಕಾರ್ಯಕ್ರಮಕ್ಕೆ ವಸತಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!