ಕಾಂಗ್ರೆಸ್‌ನಲ್ಲಿ ಮತ್ತೊಂದು #MeTooಕಾಂಡ; ರಾಹುಲ್ ಗಾಂಧಿ ಆಪ್ತನ ವಿರುದ್ಧ ದೂರು!

Published : Dec 17, 2018, 08:42 PM IST
ಕಾಂಗ್ರೆಸ್‌ನಲ್ಲಿ ಮತ್ತೊಂದು #MeTooಕಾಂಡ; ರಾಹುಲ್ ಗಾಂಧಿ ಆಪ್ತನ ವಿರುದ್ಧ ದೂರು!

ಸಾರಾಂಶ

ಪಕ್ಷದ ಐಟಿ ಸೆಲ್‌ ಸದಸ್ಯನೊಬ್ಬನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿ, ಮುಖಭಂಗಕ್ಕೊಳಗಾಗಿರುವ ಕಾಂಗ್ರೆಸ್‌ಗೆ ಇದೀಗ ಮತ್ತೊಂದು ಮುಜುಗರ ತರುವಂತಹ ಪ್ರಕರಣ ದಾಖಲಾಗಿದೆ. ರಾಹುಲ್ ಗಾಂಧಿ ಆಪ್ತ, ಕರ್ನಾಟಕ ಮೂಲದ ವ್ಯಕ್ತಿ ವಿರುದ್ಧ ಮಹಿಳೆಯೊಬ್ಬಳು ಅಂತಹದ್ದೇ ಆರೋಪ ಮಾಡಿದ್ದಾಳೆ.    

ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕಾಂಗ್ರೆಸ್ ಐಟಿ ಸೆಲ್‌ನೊಳಗಿನ ‘ಲೈಂಗಿಕ ಕಿರುಕುಳ’ ಪ್ರಕರಣದ ಬಳಿಕ ಇದೀಗ ಮತ್ತೊಬ್ಬ ಕೈ ನಾಯಕನ ವಿರುದ್ಧ ಅಂತಹದ್ದೇ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಪುತ್ರ, ರಾಹುಲ್ ಗಾಂಧಿ ಆಪ್ತ ನಿಖಿಲ್ ಆಳ್ವ ವಿರುದ್ಧ ಅದೇ ರೆಸಿಡೆನ್ಶಿಯಲ್ ಕಾಲನಿಯ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.

ಕಳೆದ ಡಿ.04ರಂದು ದಾಖಲಾಗಿರುವ FIR ಪ್ರತಿ MyNation ಗೆ ಸಿಕ್ಕಿದ್ದು, ಗುರುಗ್ರಾಮದಲ್ಲಿ ವಾಸವಾಗಿರುವ ನಿಖಿಲ್ ತನಗೆ ಅಶ್ಲೀಲ ಮೇಲ್ ಗಳನ್ನು ಕಳುಹಿಸಿದ್ದಾನೆ ಎಂದು 47 ವರ್ಷ ಪ್ರಾಯದ ಆ ಮಹಿಳೆ ದೂರಿದ್ದಾಳೆ.

ಆದರೆ, ಆರೋಪಗಳನ್ನು ನಿಖಿಲ್ ಆಳ್ವ ಅಲ್ಲಗಳೆದಿದ್ದಾರೆ. ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಶನ್ (RWA)ನಲ್ಲಿ ಹಣಕಾಸು ಅವ್ಯವಾಹಾರ ನಡೆದಿರುವ ಬಗ್ಗೆ  ದೂರನ್ನು ಸಲ್ಲಿಸಿದ 2 ದಿನಗಳ ಬಳಿಕ ಆಕೆ ಇಂತಹ ತಪ್ಪು ದೂರನ್ನು ದಾಖಲಿಸಿದ್ದಾಳೆ, ಎಂದು ಆಳ್ವಾ ಹೇಳಿದ್ದಾರೆ.

ಆಳ್ವ ವಿರುದ್ಧ ಭಾರತೀಯ ದಂಡ ಸಂಹಿತೆಯನ್ವಯ ಸೆ. 354, ಸೆ. 509 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಕರ್ನಾಟಕದವರಾದ ಮಾರ್ಗರೆಟ್ ಆಳ್ವಾ ಉತ್ತರ ಕನ್ನಡ (ಕೆನರಾ) ಕ್ಷೇತ್ರದ ಸಂಸದರಾಗಿ, ರಾಜಸ್ಥಾನ, ಉತ್ತರಾಖಂಡದ ರಾಜ್ಯಪಾಲೆಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ: ದೆಹಲಿ ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ರಮ್ಯಾ ಹೆಸರು!

ಕಳೆದ ಜು.03ರಂದು ಸೋಶಿಯಲ್ ಮೀಡಿಯಾ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು, ಕಾಂಗ್ರೆಸ್ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದರು.  

ಕೆಲಸದ ವೇಳೆ ಚಿರಾಗ್ ಪಟ್ನಾಯಕ್ ಎಂಬಾತ ಹಿಂದಿನಿಂದ ಬಂದು ತಮ್ಮನ್ನು ಮುಟ್ಟುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದನ್ನೇ ಆತ ತನ್ನ ಕಾಯಕ ಮಾಡಿಕೊಂಡಿದ್ದ ಎಂದು ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಫಾರೂಕ್ ಅಳಿಯ, ಸೇನಾಧಿಕಾರಿ, ಕಿರಿಯ ಎಂಪಿ ಪೈಲಟ್ ಜೀವನಗಾಥೆಯಿದು!

ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಪತ್ರ ಬರೆದಿದ್ದ ಆ ಮಹಿಳೆ, ಪಕ್ಷದ ಸೋಶಿಯಲ್ ಮಿಡಿಯಾ ಸೆಲ್‌ನಲ್ಲಿ ನಡೆಯುತ್ತಿರುವ ಇಂತಹ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದರು. ಅಲ್ಲದೇ ಈ ಕುರಿತು ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸೆಲ್‌ನ ಮುಖ್ಯಸ್ಥೆ ದಿವ್ಯ ಸ್ಪಂದನ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ