ನಾಟಿ ಮೇಟಿಯ ಮನೆ ಖಾಲಿ ಖಾಲಿ: ಪೇದೆ ಸುಭಾಷ್, ವಿಜಯಲಕ್ಷ್ಮೀ ನಾಪತ್ತೆ

Published : Dec 16, 2016, 03:41 AM ISTUpdated : Apr 11, 2018, 12:44 PM IST
ನಾಟಿ ಮೇಟಿಯ ಮನೆ ಖಾಲಿ ಖಾಲಿ: ಪೇದೆ ಸುಭಾಷ್, ವಿಜಯಲಕ್ಷ್ಮೀ ನಾಪತ್ತೆ

ಸಾರಾಂಶ

ಮಾಜಿ ಸಚಿವ ಮೇಟಿ ರಾಸಲೀಲೆ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಾಗಲಕೋಟೆಯಲ್ಲಿರುವ ಮೇಟಿ ಮನೆ ಖಾಲಿ ಖಾಲಿಯಾಗಿದೆ. ಪೇದೆ ಸುಭಾಷ್ , ಹಾಗೂ ವಿಜಯಲಕ್ಷ್ಮೀ ಇನ್ನೂ ಕೂಡ ಪತ್ತೆಯಾಗಿಲ್ಲ. ಈ ನಡುವೆ ಮೇಟಿ ರಾಸಲೀಲೆ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿವೆ.

ಬಾಗಲಕೋಟೆ(ಡಿ.16): ಮಾಜಿ ಸಚಿವ ಮೇಟಿ ರಾಸಲೀಲೆ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಾಗಲಕೋಟೆಯಲ್ಲಿರುವ ಮೇಟಿ ಮನೆ ಖಾಲಿ ಖಾಲಿಯಾಗಿದೆ. ಪೇದೆ ಸುಭಾಷ್ , ಹಾಗೂ ವಿಜಯಲಕ್ಷ್ಮೀ ಇನ್ನೂ ಕೂಡ ಪತ್ತೆಯಾಗಿಲ್ಲ. ಈ ನಡುವೆ ಮೇಟಿ ರಾಸಲೀಲೆ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿವೆ.

ರಾಸಲೀಲೆ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ  ರಾಜೀನಾಮೆ ನೀಡಿದ ಬಳಿಕ ಬಾಗಲಕೋಟೆಯ ನವನಗರದಲ್ಲಿರುವ ಹೆಚ್ ವೈ ಮೇಟಿ ಮನೆಗೆ ಬೀಗ ಬಿದ್ದಿದೆ.. ಅಲ್ಲೆಲ್ಲ ಬರೀ ಖಾಲಿ ಖಾಲಿ ಹೊಡೆಯುತ್ತಿದೆ. ಆದರೆ ಮನೆ ಮುಂದಿನ ಬೋರ್ಡ್ ಮಾತ್ರ ಹಾಗೇಯೇ ಇದೆ.

ಇತ್ತ  ಪ್ರಕರಣದಲ್ಲಿ ಕೇಳಿ ಬಂದಿರೋ ಸುಭಾಷ್​ ಮತ್ತು ವಿಜಯಲಕ್ಷ್ಮೀ ಸಿಡಿ ಬಿಡುಗಡೆ ಬಳಿಕ ನಾಪತ್ತೆಯಾದವರು ಇನ್ನು ಪತ್ತೆಯಾಗಿಲ್ಲ.. ಸುಭಾಷ್ ಮನೆಯಲ್ಲಿ ಅವರ ತಾಯಿ ಮತ್ತು ಪತ್ನಿ ಮಾತ್ರ ಇದ್ದಾರೆ. ಪೋಲಿಸ್ ಭದ್ರತೆ ಇದೆ.

ಮೇಟಿಯ ನಾಟಿ ಆಟಕ್ಕೆ ಜಿಲ್ಲೆಯಲ್ಲಿ ಆಕ್ರೋಶ: ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

ಮೇಟಿ ರಾಸಲೀಲೆ ಪ್ರಕರಣ ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು  ಬೀದಿಗಿಳಿದು ಮೇಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಪ್ರಕರಣದಿಂದ ಬೇಸತ್ತಿರೋ ಬಾಗಲಕೋಟೆ ಜನ್ರು ಇದೀಗ ನಾವೀಗ ತಲೆ ಎತ್ತಿ ಓಡಾಡದಂತಾಗಿದ್ದು, ಮೇಟಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಸಿಐಡಿ ಅಧಿಕಾರಿಗಳಿಂದ ವಿಚಾರಣೆ ಸಾಧ್ಯತೆ

ಇನ್ನು ಪ್ರಕರಣವನ್ನ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿರುವುದರಿಂದ ಯಾವುದೇ ಕ್ಷಣದಲ್ಲಾದರೂ ಅಧಿಕಾರಿಗಳು ಬಾಗಲಕೋಟೆಗೆ ಆಗಮಿಸಿ ವಿಚಾರಣೆ ನಡೆಸಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಮೇಟಿ ರಾಸಲೀಲೆ ರಹಸ್ಯ ಬಯಲಾದ ಬಳಿಕ ದಿನದಿಂದ ದಿನಕ್ಕೆ ಬೆಳವಣಿಗೆಗಳು ನಡೆಯುತ್ತಲೇ ಇವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನವೋದಯ ವಿವಾದ: 'ನಮ್ಮದು ಒಕ್ಕೂಟ ಸಮಾಜ' ತಮಿಳುನಾಡಿಗೆ ಸುಪ್ರೀಂ ಕೋರ್ಟ್ ತಪರಾಕಿ
NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!