
ಬೆಳಗಾವಿ(ಡಿ.27): ಮಹದಾಯಿ ವಿಚಾರದಲ್ಲೂ ಎಂಇಎಸ್ ಕ್ಯಾತೆ ತೆಗೆದಿದೆ. ಗಡಿ ವಿವಾದದಲ್ಲಿ ಸದಾ ಮೂಗು ತೂರಿಸುತ್ತಿದ್ದ ಎಂಇಎಸ್ ನಾಯಕರು ಮಹದಾಯಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಿದ್ದಾರೆ.
ಹೌದು, ಮಹಾರಾಷ್ಟ್ರ ಸರ್ಕಾರ ಮಹದಾಯಿ ಯೋಜನೆಗೆ ಒಪ್ಪಿಗೆ ಸೂಚಿಸಬಾರದು ಎಂದು ಮಹಾ ಸಿಎಂ ದೇವೇಂದ್ರ ಫಡ್ನಾವೀಸಾಗೆ ಬೆಳಗಾವಿ ಮರಾಠಾ ಯುವಮಂಚ್ ಅಧ್ಯಕ್ಷ ಸೂರಜ್ ಕಣಬರಕರ ಪತ್ರ ಬರೆದಿದ್ದಾರೆ.
ಮಹಾಜನ ಆಯೋಗದ ವರದಿ ಪ್ರಕಾರ ಕಳಸಾ ಬಂಡೂರಿ ನಾಲಾ ಪ್ರದೇಶ ಮಹಾರಾಷ್ಟಕ್ಕೆ ಸೇರುತ್ತದೆ. ಮಹಾದಾಯಿ ವಿಚಾರವಾಗಿ ಮೂರು ರಾಜ್ಯಗಳ ಸಿಎಂಗಳ ಸಭೆ ನಡೆದರೆ ಗಡಿ ವಿವಾದ ಬಗೆಹರಿಯಲಿದೆ ಎಂದು ಮಹಾರಾಷ್ಟ್ರ ಸಿಎಂಗೆ ಪತ್ರದಲ್ಲಿ ಒತ್ತಾಯಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.